ಬೆಂಗಳೂರು: ‘ಹಣಕಾಸು ಮಸೂದೆ ಬಿದ್ದು ಹೋದರೆ ಸರ್ಕಾರ ಉಳಿಯುತ್ತೊ ಇಲ್ಲವೊ ಎಂಬುದು ಅಪ್ರಸ್ತುತ ಪ್ರಶ್ನೆ’ ಎನ್ನುತ್ತಾರೆ ಹಿರಿಯ ವಕೀಲರಾದ ಎಸ್.ಎಸ್.ನಾಗಾನಂದ ಅವರು.
ಈ ಕುರಿತು ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಅವರು, ‘ಹಣಕಾಸು ಮಸೂದೆ ಮಂಡನೆಗೂ ಸರ್ಕಾರದ ಅಳಿವು ಉಳಿವಿಗೂ ಸಂಬಂಧವಿಲ್ಲ. ಒಂದು ವೇಳೆ ಮಂಡನೆ ಆಗದಿದ್ದರೆ ಸರ್ಕಾರ ಹಣ ಖರ್ಚು ಮಾಡುವಂತಿಲ್ಲ. ಅಂತೆಯೇ ಸರ್ಕಾರಿ ನೌಕರರ ಸಂಬಳ ಸ್ಥಗಿತವಾಗುತ್ತದೆ’ ಎಂದು ವಿವರಿಸಿದರು.
‘ಸರ್ಕಾರದ ಅಳಿವು ಉಳಿವು ಏನಿದ್ದರೂ ಅದು ಬಹುಮತದ ಆಧಾರದ ಮೇಲೆ ನಿಂತಿರುತ್ತದೆ’ ಎಂದು ನಾಗಾನಂದ ಅವರು ತಿಳಿಸಿದರು.