‘ಗಾಂಧಿ ಮಾತ್ರವಲ್ಲ ಬುದ್ಧ, ಬಸವರನ್ನೂ ಸಹ ಪಾರಮಾರ್ಥಿಕ ಮಂದಿರಗಳಿಂದ ಬಿಡುಗಡೆಗೊಳಿಸಿ ಅಭಿವೃದ್ಧಿ ಹರಿಕಾರರನ್ನಾಗಿ ಸ್ವೀಕರಿಸಬೇಕಾಗಿದೆ. ಬೃಹತ್ ಯಂತ್ರೋದ್ಯಮ, ಬೃಹತ್ ಯೋಜನೆಗಳ ಸುತ್ತಲೇ ಗಿರಕಿ ಹೊಡೆಯುತ್ತಿದ್ದ ಮತ್ತು ನಗರ ಕೇಂದ್ರಿತ ಅಭಿವೃದ್ಧಿ ಮಾದರಿಗಳನ್ನು ತಿರಸ್ಕರಿಸಬೇಕಾಗಿದೆ. ಹಾಗೆಂದು, ಯಂತ್ರಸ್ಥಾವರಗಳು, ಬೃಹತ್ ಯೋಜನೆಗಳು ಮತ್ತು ಮಹಾನಗರಗಳನ್ನು ವಿದ್ಯುತ್ ದೀಪ ಆರಿಸಿದಷ್ಟು ಸುಲಭವಾಗಿ ಆರಿಸಿಬಿಡಬೇಕು ಎಂದು ಹೇಳುತ್ತಿಲ್ಲ’ ಎಂದರು.