ಕಾಸರಗೋಡು: ಜಿಲ್ಲೆಯಲ್ಲಿ ಬಿಸಿಲಿನ ಪ್ರಖರತೆ ಮತ್ತಷ್ಟು ಹೆಚ್ಚಾಗಿದ್ದು, ಬಿಸಿಲಿನ ತಾಪಕ್ಕೆ ಗುರುವಾರ ಮತ್ತೆ ಇಬ್ಬರಿಗೆ ಸುಟ್ಟ ಗಾಯ ಆಗಿರುವ ಘಟನೆ ಬೆಳಕಿಗೆ ಬಂದಿದೆ. ಕಯ್ಯೂರಿನ ಸಿಸ್ನ (8), ಪನತ್ತಡಿಯ ಸಮೀರಾ (33) ಎಂಬುವವರಿಗೆ ಸುಟ್ಟ ಗಾಯಗಳಾಗಿದ್ದು , ಅವರು ಚಿಕಿತ್ಸೆ ಪಡೆಯುತ್ತಿದ್ದಾರೆ.
ಬಿಸಿಲಿನ ಝಳಕ್ಕೆ ಜಿಲ್ಲೆಯಲ್ಲಿ ಈ ತನಕ ಸುಟ್ಟ ಗಾಯಗಳಿಗೆ ಒಳಗಾದವರ ಸಂಖ್ಯೆ 12 ಕ್ಕೇ ಎರಿದೆ. ಮಾರ್ಚ್ ತಿಂಗಳಲ್ಲಿ ಎಂಟು ಮಂದಿಗೆ ಗಾಯಗಳಾಗಿದ್ದವು. ಏಪ್ರಿಲ್ ತಿಂಗಳು ನಾಲ್ಕು ಮಂದಿ ಬಿಸಿಲಿನ ತಾಪಕ್ಕೆ ಗಾಯಗೊಂಡಿದ್ದಾರೆ. ದಿನೇ ದಿನೇ ಜಿಲ್ಲೆಯಲ್ಲಿ ಬಿಸಿಲಿನ ತಾಪ ಏರಿಕೆ ಆಗುತ್ತಿದ್ದು, ಸೆಖೆ ಹೆಚ್ಚಾಗುತ್ತಿದೆ. ಮಧ್ಯಾಹ್ನದ ವೇಳೆ ಜನರು ರಸ್ತೆಗೆ ಇಳಿಯದಂತೆ ಆರೋಗ್ಯ ಇಲಾಖೆ ಅಧಿಕಾರಿಗಳು ಮುನ್ನೆಚ್ಚರಿಕೆ ನೀಡಿದ್ದಾರೆ.