ಮೈಸೂರು: ‘ಮಠ, ಆಶ್ರಮಗಳು ಭಯೋತ್ಪಾದನೆಯ ಕೇಂದ್ರಗಳಾಗಬಾರದು’ ಎಂದು ಸಾಹಿತಿ ಡಾ.ಹಂ.ಪ.ನಾಗರಾಜಯ್ಯ ತಿಳಿ ಹೇಳಿದರು.
ಇಲ್ಲಿನ ಅವಧೂತ ದತ್ತಪೀಠ ಗಣಪತಿ ಸಚ್ಚಿದಾನಂದ ಆಶ್ರಮದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
‘ಮಠಗಳಲ್ಲಿ ಉಗ್ರವಾದಿಗಳು ಸೃಷ್ಟಿ ಆಗಬಾರದು. ಬದಲಿಗೆ ಎಲ್ಲ ಜನರನ್ನೂ ಪ್ರೀತಿಸುವ ಪ್ರವೃತ್ತಿ ಬೆಳೆಯಬೇಕು. ಗುರುಗಳು ಈ ಬಗೆಯ ಪಾಠವನ್ನು ತಮ್ಮ ಶಿಷ್ಯಂದಿರಿಗೆ ಕಲಿಸಬೇಕು’ ಎಂದು ಸಲಹೆ ನೀಡಿದರು.