ಅಂಗವಿಕಲರಿಗೆ ಕೊಟ್ಟ ನೆರವಿನ ಕುರಿತು ಜಿಲ್ಲಾ ಕೈಗಾರಿಕಾ ಕೇಂದ್ರ ಹಾಗೂ ಕೃಷಿ ಇಲಾಖೆಯ ಜಂಟಿ ನಿರ್ದೇಶಕರು ನೀಡಿದ ಮಾಹಿತಿಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಆಯುಕ್ತರು, ‘ಮೊದಲು ಸಮರ್ಪಕವಾದ ಅಂಕಿ– ಅಂಶಗಳನ್ನು ಇಟ್ಟುಕೊಳ್ಳಿ, ಈ ರೀತಿಯ ಕೆಲಸ ಮಾಡಲು ಕಾಳಜಿ ಬೇಕು, ಮೊದಲು ಅದನ್ನು ರೂಢಿಸಿಕೊಳ್ಳಿ’ ಎಂದು ತರಾಟೆಗೆ ತೆಗೆದುಕೊಂಡರು.