ಸವದತ್ತಿ ಯಲ್ಲಮ್ಮನ ದೇವಸ್ಥಾನಕ್ಕೆ ಭಾನುವಾರ ಭೇಟಿ ನೀಡಿದ ನಂತರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು,‘ಹಿಂದಿನ ಅವಧಿಗಿಂತಲೂ ಬಿಜೆಪಿಗೆ ಹೆಚ್ಚಿನ ಸ್ಥಾನವನ್ನು 2019ರಲ್ಲಿ ಮತದಾರರುನೀಡಿದ್ದಾರೆ. ನೆರೆ ಪರಿಹಾರದಲ್ಲಿ ಕೇಂದ್ರ ತಾರತಮ್ಯ ಎಸಗಿದೆ. ಜನರ ಆಶೋತ್ತರಗಳಿಗೆ ಸ್ಪಂದಿಸುವ ಬದಲು ಕಾಶ್ಮೀರ, ಪೌರತ್ವ ಕಾಯ್ದೆ ತಿದ್ದುಪಡಿ ಕುರಿತು ಅತೀವ ಆಸಕ್ತಿಯನ್ನು ಕೇಂದ್ರ ತೋರಿಸುತ್ತಿದೆ. ಹಿಂದೆಂದೂ ಕಂಡಿರದ ಅತಿ ದೊಡ್ಡ ಪ್ರತಿಭಟನೆ ಮುಂಬೈನಲ್ಲಿ ನಡೆದಿದೆ. ದೇಶವ್ಯಾಪಿ ಚಳವಳಿಗಳು ಜೋರಾಗಿವೆ. ಈ ಕುರಿತು ಪಕ್ಷದೊಳಗೆ ಅಸಮಾಧಾನವಿದೆ’ ಎಂದರು.