ಬೆಂಗಳೂರು: ಶುದ್ಧ ವಾತಾವರಣದಲ್ಲಿವಾಯುವಿಹಾರ ಮಾಡಲು ಹೃದ್ರೋಗ ತಜ್ಞರು ಸೂಚನೆ ನೀಡಿರುವುದರಿಂದ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಕೊಡಗು ಜಿಲ್ಲೆಗೆ ತೆರಳಿದ್ದಾರೆಂದು ಮೂಲಗಳು ತಿಳಿಸಿವೆ.
ಕನಿಷ್ಠ ಮೂರು ದಿನಗಳು ಶುದ್ಧ ವಾತಾವರಣದಲ್ಲಿ ವಾಕ್ ಮಾಡಬೇಕು. ತಾಜಾ ಹವೆಯಲ್ಲಿ ನಡೆಯುವುದರಿಂದ ಹೆಚ್ಚಿನ ಪ್ರಯೋಜನ ಆಗುತ್ತದೆ ಎಂದು ವೈದ್ಯರು ಸಲಹೆ ನೀಡಿದ್ದಾರೆ ಎನ್ನಲಾಗಿದೆ.