ಹಾನಿಕಾರಕ: ‘ಧೂಮಪಾನ ಹಾಗೂ ಅತಿಯಾದ ಮದ್ಯಪಾನವೇ ಯುವಜನತೆಯಲ್ಲಿ ಹೃದಯಾಘಾತಕ್ಕೆ ಪ್ರಮುಖ ಕಾರಣ. ದೇಶದಲ್ಲಿ ಪ್ರತಿ ವರ್ಷ 13 ಲಕ್ಷ ಜನರು ವಾಯುಮಾಲಿನ್ಯದಿಂದಾಗಿಮೃತ ಪಡುತ್ತಿದ್ದಾರೆ. ಗಾಳಿಯಲ್ಲಿರುವಸೂಕ್ಷ್ಮಕಣಗಳು ಶ್ವಾಸಕೋಶದ ಮುಖಾಂತರ ರಕ್ತನಾಳಗಳನ್ನು ಪ್ರವೇಶಿಸಿ,ಹೃದಯಾಘಾತಕ್ಕೆ ಕಾರಣವಾಗುತ್ತಿದೆ. ಕ್ಯಾಬ್, ಟ್ರಕ್ ಚಾಲಕರಲ್ಲಿ ಹೃದಯಾಘಾತ ಹೆಚ್ಚುತ್ತಿದೆ. 10 ವರ್ಷಗಳಲ್ಲಿ ಬೆಂಗಳೂರಿನಲ್ಲಿ ವಾಯುಗುಣಮಟ್ಟ ಕುಸಿದಿದೆ. ಕಲುಷಿತ ವಾಯು ಸೇವನೆಯೂ ಧೂಮಪಾನದಷ್ಟೇ ಹಾನಿಕಾರಕ’ ಎಂದರು.