ಕಾರಾಗೃಹಗಳಿಗೆ ಮಂಜೂರಾಗಿರುವ ಒಟ್ಟು ಸಿಬ್ಬಂದಿ, ಸದ್ಯ ಖಾಲಿಯಿರುವ ಸಿಬ್ಬಂದಿ ಪ್ರಮಾಣ, ಜೈಲಿನಲ್ಲಿರುವ ಕೈದಿಗಳ ಮಕ್ಕಳಿಗೆ ಸೂಕ್ತ ಶಿಕ್ಷಣ ಕಲ್ಪಿಸುವ ವಿಚಾರ ಹಾಗೂ ಕೈದಿಗಳಿಗೆ ಒದಗಿಸುತ್ತಿರುವ ಆಹಾರದ ಗುಣಮಟ್ಟ, ಅಡುಗೆ ಮನೆಯ ನೈರ್ಮಲ್ಯದ ಬಗ್ಗೆ ಸೂಕ್ತ ಮಾಹಿತಿ ನೀಡದ ಸರ್ಕಾರದ ವೈಖರಿಗೆ ನ್ಯಾಯಪೀಠ ಅತೃಪ್ತಿ ವ್ಯಕ್ತಪಡಿಸಿತು.