‘ಆಸ್ತಿ ತೆರಿಗೆ ಸಂಗ್ರಹಿಸುತ್ತಿರುವುದು ರಾಜ್ಯದ ಬೊಕ್ಕಸ ತುಂಬಿಸಲು ಅಲ್ಲ. ಬದಲಿಗೆ ಆಯಾ ನಗರದ ತೆರಿಗೆ ಹಣವನ್ನು ಸ್ಥಳೀಯ ಮೂಲಸೌಕರ್ಯ ಅಭಿವೃದ್ಧಿಗೆ ಬಳಸಲಾಗುವುದು. ಅದಕ್ಕಾಗಿಯೇ ಪರಿಷ್ಕೃತ ತೆರಿಗೆ ಹಣವನ್ನು ಭರಿಸಲು ಮೂರು ತಿಂಗಳ ಕಾಲಾವಕಾಶ ನೀಡಲಾಗಿದೆ. ಹಾಗೆಯೇ ನೀರು, ಕಂದಾಯ ಸೇರಿದಂತೆ ತೆರಿಗೆ ಬಾಕಿದಾರರಿಗೆ ಯಾವುದೇ ರಿಯಾಯಿತಿ ನೀಡುವುದಾಗಲೀ ಅಥವಾ ಒಂದು ಬಾರಿ ಭರಿಸುವ ಅವಕಾಶ ನೀಡುವ ಪ್ರಸ್ತಾಪ ಸರ್ಕಾರದ ಮುಂದಿಲ್ಲ. ತೆರಿಗೆ ಕಟ್ಟದವರ ವಿರುದ್ಧ ಕಾನೂನು ರೀತಿಯಲ್ಲಿ ಕ್ರಮ ಕೈಗೊಳ್ಳಲಾಗುವುದು’ ಎಂದು ಎಚ್ಚರಿಕೆ ನೀಡಿದರು.