ಬಹುಮಾನಿತ ಕತೆಗಳು ‘ಸಂಗಾತ’ದ ನವೆಂಬರ್ ಸಂಚಿಕೆಯಲ್ಲಿ ಪ್ರಕಟಗೊಳ್ಳಲಿವೆ. ಹಿರಿಯ ಬರಹಗಾರರಾದ ಕೇಶವ ಮಳಗಿ ಹಾಗೂ ವಿನಯಾ ಒಕ್ಕುಂದ ಅವರು ತೀರ್ಪುಗಾರರಾಗಿದ್ದರು. 2020ರ ಜನವರಿಯಲ್ಲಿ ಧಾರವಾಡದಲ್ಲಿ ನಡೆಯುವ ಸಂಗಾತ ಪತ್ರಿಕೆಯ ದ್ವಿತೀಯ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಬಹುಮಾನ ವಿತರಿಸಲಾಗುವುದು ಎಂದು ಪತ್ರಿಕೆ ಸಂಪಾದಕ ಟಿ.ಎಸ್.ಗೊರವರ ತಿಳಿಸಿದ್ದಾರೆ.