ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಜಾಲಗಾರ’ಕ್ಕೆ ಕಥಾ ಬಹುಮಾನ

Last Updated 22 ಅಕ್ಟೋಬರ್ 2019, 2:31 IST
ಅಕ್ಷರ ಗಾತ್ರ

ಬೆಂಗಳೂರು: ಧಾರವಾಡದ ‘ಸಂಗಾತ’ ತ್ರೈಮಾಸಿಕ ಸಾಹಿತ್ಯ ಪತ್ರಿಕೆ ಆಯೋಜಿಸಿದ್ದ ಯುವ ಕಥಾ ಸ್ಪರ್ಧೆಯಲ್ಲಿ ದಾದಾಪೀರ್ ಜೈಮನ್ ಅವರ ಕಥೆ ‘ಜಾಲಗಾರ’ ಬಹುಮಾನ ಪಡೆದಿದೆ.

‌ಒಪ್ಪಿತ ಕಥೆಗಳಾಗಿ ಅಮರೇಶ ಗಿಣಿವಾರ ಅವರ ‘ಹಿಂಡೆಕುಳ್ಳು’ ಮತ್ತು ಸಂಗನಗೌಡ ಹಿರೇಗೌಡ ಅವರ ‘ಗಾಯದ ಬೆನ್ನು’ ಆಯ್ಕೆಯಾಗಿವೆ. ಬಹುಮಾನಿತ ಕಥೆಗೆ ₹10 ಸಾವಿರ, ಒಪ್ಪಿತ ಎರಡೂ ಕಥೆಗಳಿಗೆ ತಲಾ ₹5 ಸಾವಿರ ನಗದು ಬಹುಮಾನವಿದೆ.

ಬಹುಮಾನಿತ ಕತೆಗಳು ‘ಸಂಗಾತ’ದ ನವೆಂಬರ್ ಸಂಚಿಕೆಯಲ್ಲಿ ಪ್ರಕಟಗೊಳ್ಳಲಿವೆ. ಹಿರಿಯ ಬರಹಗಾರರಾದ ಕೇಶವ ಮಳಗಿ ಹಾಗೂ ವಿನಯಾ ಒಕ್ಕುಂದ ಅವರು ತೀರ್ಪುಗಾರರಾಗಿದ್ದರು. 2020ರ ಜನವರಿಯಲ್ಲಿ ಧಾರವಾಡದಲ್ಲಿ ನಡೆಯುವ ಸಂಗಾತ ಪತ್ರಿಕೆಯ ದ್ವಿತೀಯ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಬಹುಮಾನ ವಿತರಿಸಲಾಗುವುದು ಎಂದು ಪತ್ರಿಕೆ ಸಂಪಾದಕ ಟಿ.ಎಸ್.ಗೊರವರ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT