ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಕಟೀಲ್ ಇನ್ನೂ ಚಿಕ್ಕವರು. ಘನತೆಗೆ ತಕ್ಕಂತೆ ಮಾತನಾಡುವ ಸಂಸ್ಕೃತಿ ಕಲಿಯುವ ಅಗತ್ಯವಿದೆ. ಅನುಭವದ ಕೊರತೆ ಇರುವಂತೆ ಕಾಣುತ್ತಿದೆ. ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ, ಬಿಜೆಪಿ ನಾಯಕ ಎಲ್.ಕೆ.ಅಡ್ವಾಣಿ ಚುನಾವಣೆಯಲ್ಲಿ ಸೋಲು ಕಂಡಿರಲಿಲ್ಲವೇ?’ ಎಂದು ಕುಟುಕಿದರು.