ಆರಂಭದಲ್ಲಿ ನಾಲ್ಕು ಐಚ್ಚಿಕ ವಿಷಯಗ ಳನ್ನು ಪರಿಚಯಿಸಲಾಗಿತ್ತು. ಇಂದು ಜಾನ ಪದ, ಆಧುನಿಕ ಕನ್ನಡ ಸಾಹಿತ್ಯಕಷ್ಟೇ ಸೀಮಿತವಾಗಿದೆ. ತೌಲನಿಕ ಅಧ್ಯಯನ, ವಿಮರ್ಶಾ ಪ್ರಕಾರಗಳಿಗೆ ತಿಲಾಂಜಲಿ ನೀಡಲಾಗಿದೆ. ವಿಸ್ತರಣಾ ಕಾರ್ಯಕ್ರಮಗಳು, ಕ್ಷೇತ್ರ ಕಾರ್ಯ, ಹೊರಗಿನ ಸಂಶೋಧನೆಗಳು ಇಲ್ಲವಾಗಿವೆ. ವಿಶ್ವವಿದ್ಯಾಲ ಯದಲ್ಲಿ ಕನ್ನಡಕ್ಕೆ ಮೇರು ಸ್ಥಾನ ಇರಬೇಕು ಎಂಬ ಕಾರಣಕ್ಕೆ ಪ್ರವೇಶ ದ್ವಾರದ ಬಳಿಯೇ ಕಲಾತ್ಮಕ ಕಟ್ಟಡ ನಿರ್ಮಿಸಲು ಕೆಲವು ವರ್ಷಗಳ ಹಿಂದೆ ನಿರ್ಧರಿಸಲಾಗಿತ್ತು. ಸರ್ಕಾರವೂ ಅನು ಮತಿ ನೀಡಿತ್ತು. ಆದರೆ, ಪ್ರತ್ಯೇಕ ಅನುದಾನ ನೀಡಲಿಲ್ಲ ಎಂಬ ಕಾರಣಕ್ಕೆ ಇದುವರೆಗೂ ಕಟ್ಟಡ ನಿರ್ಮಾಣ ಕಾರ್ಯ ಆರಂಭವಾಗಿಲ್ಲ.