<p><strong>ಬೆಂಗಳೂರು:</strong> ಡಾ.ಎಚ್.ನರಸಿಂಹಯ್ಯ ಅವರ ಜನ್ಮಶತಮಾನೋತ್ಸವ ಅಂಗವಾಗಿ ಕಪ್ಪಣ್ಣ ಅಂಗಳ ಫೇಸ್ಬುಕ್ ಪುಟದಲ್ಲಿ ಎಚ್.ಎನ್. ಕುರಿತು ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.</p>.<p>ವಿಮರ್ಶಕ ಡಾ. ಎಚ್.ಎಸ್.ರಾಘವೇಂದ್ರ ರಾವ್ ಅವರು ಎಚ್.ಎನ್. ಅವರ ಜೀವನ ಕೃತಿಗಳ ಕುರಿತು ಮಾತನಾಡಿದರು. ಎಚ್.ಎನ್ ಅವರು ಕಟ್ಟಬಯಸಿದ್ದ ಸಮಾಜ, ಅದನ್ನು ರೂಪಿಸಲು ಪಟ್ಟ ಶ್ರಮ, ಒಲ್ಲದವರನ್ನು ಒಲಿಸುವ ಹೋರಾಟ ಹಾಗೂ ಅವರ ಮನದಾಳದ ಬಗ್ಗೆ ಮಾತನಾಡಿದರು.</p>.<p>ಹಿರಿಯ ಪತ್ರಕರ್ತ ಎಂ.ಕೆ.ಭಾಸ್ಕರ್ ರಾವ್ ಅವರು ಎಚ್.ಎನ್ ಅವರ ಹೋರಾಟ, ರಾಜಕೀಯ ಜೀವನದ ಆದರ್ಶ ಮತ್ತು ಬದುಕಿನ ನಂಬಿಕೆಗಳ ಬಗ್ಗೆ ಮಾತನಾಡಿದರೆ, ಎಚ್.ಎನ್. ಅವರ ಜೀವನದ ಕೆಲವು ಘಟನೆಗಳ ಕುರಿತು ಕವಿ ಸಿದ್ಧಲಿಂಗಯ್ಯ ಮಾತನಾಡಿದರು.</p>.<p>ಘಂಟಸಾಲ ಗಾಯನದ ಹಾಡುಗಳಿಗೆ ಪ್ರಸಿದ್ಧರಾದ ಹಿರಿಯ ಕಲಾವಿದ ಶಶಿಧರ್ ಅವರು ಎಚ್.ಎನ್.ಅವರ ಪ್ರಿಯವಾದ ‘ಏಡು ಕುಂಡಲವಾಡ’ ಗೀತೆ ಹಾಡಿದರು. ಜನಪದ ಗಾಯಕ ಚಾಮರಾಜನಗರದ ನರಸಿಂಹಯ್ಯ ಮತ್ತು ತಂಡದವರು ಸಂಗೀತ ಕಾರ್ಯಕ್ರಮ ನಡೆಸಿಕೊಟ್ಟರು.</p>.<p>ವಿಡಿಯೊ ಸ್ಪರ್ಧೆಯ ಫಲಿತಾಂಶವನ್ನು ಲಲಿತಾ ಶ್ರೀನಿವಾಸ್ ಪ್ರಕಟಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು:</strong> ಡಾ.ಎಚ್.ನರಸಿಂಹಯ್ಯ ಅವರ ಜನ್ಮಶತಮಾನೋತ್ಸವ ಅಂಗವಾಗಿ ಕಪ್ಪಣ್ಣ ಅಂಗಳ ಫೇಸ್ಬುಕ್ ಪುಟದಲ್ಲಿ ಎಚ್.ಎನ್. ಕುರಿತು ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.</p>.<p>ವಿಮರ್ಶಕ ಡಾ. ಎಚ್.ಎಸ್.ರಾಘವೇಂದ್ರ ರಾವ್ ಅವರು ಎಚ್.ಎನ್. ಅವರ ಜೀವನ ಕೃತಿಗಳ ಕುರಿತು ಮಾತನಾಡಿದರು. ಎಚ್.ಎನ್ ಅವರು ಕಟ್ಟಬಯಸಿದ್ದ ಸಮಾಜ, ಅದನ್ನು ರೂಪಿಸಲು ಪಟ್ಟ ಶ್ರಮ, ಒಲ್ಲದವರನ್ನು ಒಲಿಸುವ ಹೋರಾಟ ಹಾಗೂ ಅವರ ಮನದಾಳದ ಬಗ್ಗೆ ಮಾತನಾಡಿದರು.</p>.<p>ಹಿರಿಯ ಪತ್ರಕರ್ತ ಎಂ.ಕೆ.ಭಾಸ್ಕರ್ ರಾವ್ ಅವರು ಎಚ್.ಎನ್ ಅವರ ಹೋರಾಟ, ರಾಜಕೀಯ ಜೀವನದ ಆದರ್ಶ ಮತ್ತು ಬದುಕಿನ ನಂಬಿಕೆಗಳ ಬಗ್ಗೆ ಮಾತನಾಡಿದರೆ, ಎಚ್.ಎನ್. ಅವರ ಜೀವನದ ಕೆಲವು ಘಟನೆಗಳ ಕುರಿತು ಕವಿ ಸಿದ್ಧಲಿಂಗಯ್ಯ ಮಾತನಾಡಿದರು.</p>.<p>ಘಂಟಸಾಲ ಗಾಯನದ ಹಾಡುಗಳಿಗೆ ಪ್ರಸಿದ್ಧರಾದ ಹಿರಿಯ ಕಲಾವಿದ ಶಶಿಧರ್ ಅವರು ಎಚ್.ಎನ್.ಅವರ ಪ್ರಿಯವಾದ ‘ಏಡು ಕುಂಡಲವಾಡ’ ಗೀತೆ ಹಾಡಿದರು. ಜನಪದ ಗಾಯಕ ಚಾಮರಾಜನಗರದ ನರಸಿಂಹಯ್ಯ ಮತ್ತು ತಂಡದವರು ಸಂಗೀತ ಕಾರ್ಯಕ್ರಮ ನಡೆಸಿಕೊಟ್ಟರು.</p>.<p>ವಿಡಿಯೊ ಸ್ಪರ್ಧೆಯ ಫಲಿತಾಂಶವನ್ನು ಲಲಿತಾ ಶ್ರೀನಿವಾಸ್ ಪ್ರಕಟಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>