<p><strong>ಬೆಂಗಳೂರು:</strong> ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ. ಕುಮಾರಸ್ವಾಮಿ ಅವರಿಗೆ 60 ವರ್ಷ ತುಂಬಿದ ಪ್ರಯುಕ್ತ ಷಷ್ಟ್ಯಬ್ದಿ ಆಚರಣೆಗೆ ಸಿದ್ಧತೆ ಆರಂಭವಾಗಿದ್ದು, ಇದೇ ಹಿನ್ನೆಲೆಯಲ್ಲಿ ಶುಕ್ರವಾರ ಜೆ.ಪಿ.ನಗರದ ನಿವಾಸದಲ್ಲಿ ಶಾಸಕರ ಸಭೆ ಹಮ್ಮಿಕೊಂಡಿದ್ದಾರೆ.<br /><br />ಸೋಲಿನಿಂದ ಕಂಗೆಟ್ಟುಪಕ್ಷ ಪುನಶ್ಚೇತನಗೊಳ್ಳಲು ಎಂತಹ ಕ್ರಮ ಕೈಗೊಳ್ಳಬೇಕು ಎಂಬ ಸಮಾಲೋಚನೆಗಿಂತಲೂ, ಶಾಸಕರನ್ನು ಹಿಡಿದಿಟ್ಟುಕೊಳ್ಳುವುದಕ್ಕೆ ಈ ಸಭೆ ಮಹತ್ವ ನೀಡಲಿದೆ ಎಂದು ಹೇಳಲಾಗಿದೆ.<br /><br />ಷಷ್ಟ್ಯಬ್ದ ಪೂಜೆ ಮೂಲಕ ಕಷ್ಟದಿಂದ ಪಾರಾಗಲು ಎಚ್ಡಿಕೆ ಮುಂದಾಗಿದ್ದು, ಇದೀಗ ಚುನಾವಣೆ ಸೋಲಿನ ಆಘಾತದಿಂದಲೂ ಅವರು ಸುಧಾರಿಸುತ್ತಿದ್ದಾರೆ. ಅನಾರೋಗ್ಯದಿಂದಲೂ ಬಹುತೇಕ ಚೇತರಿಸಿಕೊಳ್ಳುತ್ತಿದ್ದಾರೆ.<br /><br />ಇದೇ 16ರಂದು ಕುಮಾರಸ್ವಾಮಿ ಅವರ ಜನ್ಮದಿನ ನಡೆಯಲಿದ್ದು, ಷಷ್ಟ್ಯಬ್ದ ಅದೇ ದಿನ ನಡೆಯಲಿದೆ. ಜ್ಯೋತಿಷಿಗಳ ಸಲಹೆ ಮೇರೆಗೆ ಶುಕ್ರವಾರದಿಂದಲೇ ಷಷ್ಟ್ಯಬ್ದ ಸಮಾರಂಭಕ್ಕೆ ಮೊದಲಾಗಿ ಹಲವು ಧಾರ್ಮಿಕ ವಿಧಿ ವಿಧಾನಗಳು ನಡೆಯಲಿವೆ.</p>.<p>ಇದನ್ನೂ ಓದಿ...<a href="https://www.prajavani.net/stories/stateregional/kumaraswamy-attacks-on-yediyurappa-over-ramanagara-issue-689857.html" target="_blank">ರಾಮನಗರಕ್ಕೆ ಅನ್ಯಾಯ ಮಾಡಬೇಡಿ: ಎಚ್ಡಿಕೆ</a></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು:</strong> ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ. ಕುಮಾರಸ್ವಾಮಿ ಅವರಿಗೆ 60 ವರ್ಷ ತುಂಬಿದ ಪ್ರಯುಕ್ತ ಷಷ್ಟ್ಯಬ್ದಿ ಆಚರಣೆಗೆ ಸಿದ್ಧತೆ ಆರಂಭವಾಗಿದ್ದು, ಇದೇ ಹಿನ್ನೆಲೆಯಲ್ಲಿ ಶುಕ್ರವಾರ ಜೆ.ಪಿ.ನಗರದ ನಿವಾಸದಲ್ಲಿ ಶಾಸಕರ ಸಭೆ ಹಮ್ಮಿಕೊಂಡಿದ್ದಾರೆ.<br /><br />ಸೋಲಿನಿಂದ ಕಂಗೆಟ್ಟುಪಕ್ಷ ಪುನಶ್ಚೇತನಗೊಳ್ಳಲು ಎಂತಹ ಕ್ರಮ ಕೈಗೊಳ್ಳಬೇಕು ಎಂಬ ಸಮಾಲೋಚನೆಗಿಂತಲೂ, ಶಾಸಕರನ್ನು ಹಿಡಿದಿಟ್ಟುಕೊಳ್ಳುವುದಕ್ಕೆ ಈ ಸಭೆ ಮಹತ್ವ ನೀಡಲಿದೆ ಎಂದು ಹೇಳಲಾಗಿದೆ.<br /><br />ಷಷ್ಟ್ಯಬ್ದ ಪೂಜೆ ಮೂಲಕ ಕಷ್ಟದಿಂದ ಪಾರಾಗಲು ಎಚ್ಡಿಕೆ ಮುಂದಾಗಿದ್ದು, ಇದೀಗ ಚುನಾವಣೆ ಸೋಲಿನ ಆಘಾತದಿಂದಲೂ ಅವರು ಸುಧಾರಿಸುತ್ತಿದ್ದಾರೆ. ಅನಾರೋಗ್ಯದಿಂದಲೂ ಬಹುತೇಕ ಚೇತರಿಸಿಕೊಳ್ಳುತ್ತಿದ್ದಾರೆ.<br /><br />ಇದೇ 16ರಂದು ಕುಮಾರಸ್ವಾಮಿ ಅವರ ಜನ್ಮದಿನ ನಡೆಯಲಿದ್ದು, ಷಷ್ಟ್ಯಬ್ದ ಅದೇ ದಿನ ನಡೆಯಲಿದೆ. ಜ್ಯೋತಿಷಿಗಳ ಸಲಹೆ ಮೇರೆಗೆ ಶುಕ್ರವಾರದಿಂದಲೇ ಷಷ್ಟ್ಯಬ್ದ ಸಮಾರಂಭಕ್ಕೆ ಮೊದಲಾಗಿ ಹಲವು ಧಾರ್ಮಿಕ ವಿಧಿ ವಿಧಾನಗಳು ನಡೆಯಲಿವೆ.</p>.<p>ಇದನ್ನೂ ಓದಿ...<a href="https://www.prajavani.net/stories/stateregional/kumaraswamy-attacks-on-yediyurappa-over-ramanagara-issue-689857.html" target="_blank">ರಾಮನಗರಕ್ಕೆ ಅನ್ಯಾಯ ಮಾಡಬೇಡಿ: ಎಚ್ಡಿಕೆ</a></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>