<p><strong>ಚಾಮರಾಜನಗರ</strong>: ‘ನಾನೀಗ ರಾಜಕಾರಣ ಬಿಟ್ಟಿದ್ದೇನೆ. ವೈದ್ಯಕೀಯ ವಿದ್ಯಾರ್ಥಿಗಳ ಬಗ್ಗೆ ಮಾತ್ರ ಗಮನ ನೀಡುತ್ತೀದ್ದೇನೆ’ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಭಾನುವಾರ ಇಲ್ಲಿ ಹೇಳಿದರು.</p>.<p>ಯಡಿಯೂರಪ್ಪ ಹಾಗೂ ಸಿದ್ದರಾಮಯ್ಯ ನಡುವಿನ ಬಾಂಧವ್ಯ ಹಾಗೂ ಸಿ.ಪಿ.ಯೋಗೇಶ್ವರ್ ಅವರು ಯಡಿಯೂರಪ್ಪ ವಿರುದ್ಧ ಹೈಕಮಾಂಡ್ಗೆ ದೂರು ನೀಡುತ್ತಿರುವ ವಿಚಾರ ಕುರಿತು, ರಾಜಕೀಯದಲ್ಲಿ ಏನು ಬೇಕಾದರೂ ನಡೆಯಬಹುದು ಎಂದರು.</p>.<p>ಶಾದಿ ಭಾಗ್ಯ ರದ್ದು ಮಾಡಿರುವ ಬಗ್ಗೆ, ‘ಕಾಂಗ್ರೆಸ್ ಯಾವಾಗಲೂ ತಾರತಮ್ಯ ಮಾಡುವ ಪಕ್ಷ. ಬಿಜೆಪಿ ಎಲ್ಲ ವರ್ಗವನ್ನೂ ಒಂದೇ ರೀತಿ ನೋಡುತ್ತದೆ. ಬಜೆಟ್ನಲ್ಲಿ ಎಲ್ಲ ವರ್ಗದವರಿಗೂ ಕೊಡುಗೆ ನೀಡಲಾಗಿದೆ’ ಎಂದು ತಿಳಿಸಿದರು.</p>.<p>**<br /><strong>ಸಚಿವರ ಅಳಿಯನ ವಿರುದ್ಧ ಸ್ವಾಮೀಜಿ ಆರೋಪ<br />ಗೋಕಾಕ (ಬೆಳಗಾವಿ ಜಿಲ್ಲೆ):</strong> ‘ಜಲಸಂಪನ್ಮೂಲ ಸಚಿವ ರಮೇಶ ಜಾರಕಿಹೊಳಿ ಅವರ ಅಳಿಯ ಅಂಬಿರಾವ ಪಾಟೀಲ ಹಾಗೂ ಬೆಂಬಲಿಗರು ನನಗೆ ಕಿರುಕುಳ ನೀಡುತ್ತಿದ್ದಾರೆ’ ಎಂದು ಗೋಕಾಕ ತಾಲ್ಲೂಕಿನ ಯೋಗಿಕೊಳ್ಳದ ನಿರ್ವಾಣೇಶ್ವರ ಮಠದ ವೀರಭದ್ರ ಸ್ವಾಮೀಜಿ ಆರೋಪಿಸಿದ್ದಾರೆ.</p>.<p>ಭಾನುವಾರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ‘ಅವಧೂತ ಪರಂಪರೆಯ ಈ ಮಠದಲ್ಲಿ 15 ವರ್ಷಗಳಿಂದ ಪೀಠಾಧಿಪತಿಯಾಗಿದ್ದೇನೆ. ಆದರೆ, ಮಠದ ಜೀರ್ಣೋದ್ಧಾರ ಆಗಿರಲಿಲ್ಲ. ಇದಕ್ಕಾಗಿ ಪಿತ್ರಾರ್ಜಿತವಾದ 16 ಎಕರೆಯಲ್ಲಿ 5 ಎಕರೆಯನ್ನು ಮಾರಿದ್ದೆ. ಪೂರ್ವಾಶ್ರಮದ ಆಸ್ತಿ ಅದು. ಆ ಹಣದಿಂದ ಅಭಿವೃದ್ಧಿಗೆ ಯೋಜಿಸಿದ್ದೆ. ಆದರೆ, ಜಮೀನು ಮಾರಿದ್ದರ ಹಣ ನನಗೆ ತಲುಪದಂತೆ ಮಾಡಿದ್ದಾರೆ. ಇದರಿಂದ ಬೇಸರವಾಗಿದೆ. ಹಣ ಕೇಳಿದರೆ ಕಿರುಕುಳ ನೀಡುತ್ತಿದ್ದಾರೆ’ ಎಂದು ದೂರಿದ್ದಾರೆ.</p>.<p>ಪ್ರತಿಕ್ರಿಯೆಗೆ ರಮೇಶ ಜಾರಕಿಹೊಳಿ ಹಾಗೂ ಅಂಬಿರಾವ ಲಭ್ಯವಾಗಲಿಲ್ಲ.</p>.<p>**<br /><strong>ಎತ್ತಿನಹೊಳೆ ವರದಿ ಸಲ್ಲಿಸಿ ಜಾರಕಿಹೊಳಿ ಸೂಚನೆ<br />ಬೆಂಗಳೂರು: </strong>ಬಯಲುಸೀಮೆ ಜಿಲ್ಲೆಗೆ ನೀರು ಒದಗಿಸುವ ಎತ್ತಿನಹೊಳೆ ಯೋಜನೆ ವಿಳಂಬ ಹಾಗೂ ಯೋಜನಾ ಗಾತ್ರ ಹಿಗ್ಗಿರುವ ಬಗ್ಗೆ ಸಮಗ್ರ ವರದಿ ಸಲ್ಲಿಸುವಂತೆ ಜಲಸಂಪನ್ಮೂಲ ಸಚಿವ ರಮೇಶ ಜಾರಕಿಹೊಳಿ ಅವರು ಅಧಿಕಾರಿಗಳಿಗೆ ಸೂಚಿಸಿದ್ದಾರೆ.</p>.<p>‘ದಿಕ್ಕು ತಪ್ಪಿದ ಎತ್ತಿನಹೊಳೆ’ ಯೋಜನೆ ಬಗ್ಗೆ ‘ಪ್ರಜಾವಾಣಿ’ಯ ಭಾನುವಾರದ ‘ಒಳನೋಟ’ದಲ್ಲಿ ಭಾನುವಾರ ವಿವರವಾದ ವರದಿ ಪ್ರಕಟವಾಗಿತ್ತು. ಈ ಬಗ್ಗೆ ಒಂದೆರಡು ದಿನಗಳಲ್ಲಿ ವರದಿ ಸಲ್ಲಿಸಬೇಕು ಎಂದು ಅವರು ಹಿರಿಯ ಅಧಿಕಾರಿಗಳಿಗೆ ಸೂಚಿಸಿದ್ದಾರೆ.</p>.<p>‘ಯೋಜನೆಯನ್ನು ಹಂತ ಹಂತವಾಗಿ ಅನುಷ್ಠಾನ ಮಾಡಬೇಕಿತ್ತು. ಆಗ ಕೆಲವು ಜಿಲ್ಲೆಗಳಿಗೆ ನೀರು ಪೂರೈಕೆ ಆಗುತ್ತಿತ್ತು. ಅದರ ಬದಲು ಬೇಕಾಬಿಟ್ಟಿ ಟೆಂಡರ್ ಕರೆದು ಯೋಜನಾ ಮೊತ್ತವನ್ನು ಹಿಗ್ಗಿಸಲಾಗಿದೆ. ಭೂಸ್ವಾಧೀನ ಮಾಡದೆಯೇ ಟೆಂಡರ್ ಕರೆಯಲಾಗಿದೆ. ಈ ವಿಷಯಗಳ ಬಗ್ಗೆ ವರದಿಯಲ್ಲಿ ಪ್ರಸ್ತಾಪಿಸುವಂತೆ ಸೂಚಿಸಿದ್ದಾರೆ’ ಎಂದು ಮೂಲಗಳು ಹೇಳಿವೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಚಾಮರಾಜನಗರ</strong>: ‘ನಾನೀಗ ರಾಜಕಾರಣ ಬಿಟ್ಟಿದ್ದೇನೆ. ವೈದ್ಯಕೀಯ ವಿದ್ಯಾರ್ಥಿಗಳ ಬಗ್ಗೆ ಮಾತ್ರ ಗಮನ ನೀಡುತ್ತೀದ್ದೇನೆ’ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಭಾನುವಾರ ಇಲ್ಲಿ ಹೇಳಿದರು.</p>.<p>ಯಡಿಯೂರಪ್ಪ ಹಾಗೂ ಸಿದ್ದರಾಮಯ್ಯ ನಡುವಿನ ಬಾಂಧವ್ಯ ಹಾಗೂ ಸಿ.ಪಿ.ಯೋಗೇಶ್ವರ್ ಅವರು ಯಡಿಯೂರಪ್ಪ ವಿರುದ್ಧ ಹೈಕಮಾಂಡ್ಗೆ ದೂರು ನೀಡುತ್ತಿರುವ ವಿಚಾರ ಕುರಿತು, ರಾಜಕೀಯದಲ್ಲಿ ಏನು ಬೇಕಾದರೂ ನಡೆಯಬಹುದು ಎಂದರು.</p>.<p>ಶಾದಿ ಭಾಗ್ಯ ರದ್ದು ಮಾಡಿರುವ ಬಗ್ಗೆ, ‘ಕಾಂಗ್ರೆಸ್ ಯಾವಾಗಲೂ ತಾರತಮ್ಯ ಮಾಡುವ ಪಕ್ಷ. ಬಿಜೆಪಿ ಎಲ್ಲ ವರ್ಗವನ್ನೂ ಒಂದೇ ರೀತಿ ನೋಡುತ್ತದೆ. ಬಜೆಟ್ನಲ್ಲಿ ಎಲ್ಲ ವರ್ಗದವರಿಗೂ ಕೊಡುಗೆ ನೀಡಲಾಗಿದೆ’ ಎಂದು ತಿಳಿಸಿದರು.</p>.<p>**<br /><strong>ಸಚಿವರ ಅಳಿಯನ ವಿರುದ್ಧ ಸ್ವಾಮೀಜಿ ಆರೋಪ<br />ಗೋಕಾಕ (ಬೆಳಗಾವಿ ಜಿಲ್ಲೆ):</strong> ‘ಜಲಸಂಪನ್ಮೂಲ ಸಚಿವ ರಮೇಶ ಜಾರಕಿಹೊಳಿ ಅವರ ಅಳಿಯ ಅಂಬಿರಾವ ಪಾಟೀಲ ಹಾಗೂ ಬೆಂಬಲಿಗರು ನನಗೆ ಕಿರುಕುಳ ನೀಡುತ್ತಿದ್ದಾರೆ’ ಎಂದು ಗೋಕಾಕ ತಾಲ್ಲೂಕಿನ ಯೋಗಿಕೊಳ್ಳದ ನಿರ್ವಾಣೇಶ್ವರ ಮಠದ ವೀರಭದ್ರ ಸ್ವಾಮೀಜಿ ಆರೋಪಿಸಿದ್ದಾರೆ.</p>.<p>ಭಾನುವಾರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ‘ಅವಧೂತ ಪರಂಪರೆಯ ಈ ಮಠದಲ್ಲಿ 15 ವರ್ಷಗಳಿಂದ ಪೀಠಾಧಿಪತಿಯಾಗಿದ್ದೇನೆ. ಆದರೆ, ಮಠದ ಜೀರ್ಣೋದ್ಧಾರ ಆಗಿರಲಿಲ್ಲ. ಇದಕ್ಕಾಗಿ ಪಿತ್ರಾರ್ಜಿತವಾದ 16 ಎಕರೆಯಲ್ಲಿ 5 ಎಕರೆಯನ್ನು ಮಾರಿದ್ದೆ. ಪೂರ್ವಾಶ್ರಮದ ಆಸ್ತಿ ಅದು. ಆ ಹಣದಿಂದ ಅಭಿವೃದ್ಧಿಗೆ ಯೋಜಿಸಿದ್ದೆ. ಆದರೆ, ಜಮೀನು ಮಾರಿದ್ದರ ಹಣ ನನಗೆ ತಲುಪದಂತೆ ಮಾಡಿದ್ದಾರೆ. ಇದರಿಂದ ಬೇಸರವಾಗಿದೆ. ಹಣ ಕೇಳಿದರೆ ಕಿರುಕುಳ ನೀಡುತ್ತಿದ್ದಾರೆ’ ಎಂದು ದೂರಿದ್ದಾರೆ.</p>.<p>ಪ್ರತಿಕ್ರಿಯೆಗೆ ರಮೇಶ ಜಾರಕಿಹೊಳಿ ಹಾಗೂ ಅಂಬಿರಾವ ಲಭ್ಯವಾಗಲಿಲ್ಲ.</p>.<p>**<br /><strong>ಎತ್ತಿನಹೊಳೆ ವರದಿ ಸಲ್ಲಿಸಿ ಜಾರಕಿಹೊಳಿ ಸೂಚನೆ<br />ಬೆಂಗಳೂರು: </strong>ಬಯಲುಸೀಮೆ ಜಿಲ್ಲೆಗೆ ನೀರು ಒದಗಿಸುವ ಎತ್ತಿನಹೊಳೆ ಯೋಜನೆ ವಿಳಂಬ ಹಾಗೂ ಯೋಜನಾ ಗಾತ್ರ ಹಿಗ್ಗಿರುವ ಬಗ್ಗೆ ಸಮಗ್ರ ವರದಿ ಸಲ್ಲಿಸುವಂತೆ ಜಲಸಂಪನ್ಮೂಲ ಸಚಿವ ರಮೇಶ ಜಾರಕಿಹೊಳಿ ಅವರು ಅಧಿಕಾರಿಗಳಿಗೆ ಸೂಚಿಸಿದ್ದಾರೆ.</p>.<p>‘ದಿಕ್ಕು ತಪ್ಪಿದ ಎತ್ತಿನಹೊಳೆ’ ಯೋಜನೆ ಬಗ್ಗೆ ‘ಪ್ರಜಾವಾಣಿ’ಯ ಭಾನುವಾರದ ‘ಒಳನೋಟ’ದಲ್ಲಿ ಭಾನುವಾರ ವಿವರವಾದ ವರದಿ ಪ್ರಕಟವಾಗಿತ್ತು. ಈ ಬಗ್ಗೆ ಒಂದೆರಡು ದಿನಗಳಲ್ಲಿ ವರದಿ ಸಲ್ಲಿಸಬೇಕು ಎಂದು ಅವರು ಹಿರಿಯ ಅಧಿಕಾರಿಗಳಿಗೆ ಸೂಚಿಸಿದ್ದಾರೆ.</p>.<p>‘ಯೋಜನೆಯನ್ನು ಹಂತ ಹಂತವಾಗಿ ಅನುಷ್ಠಾನ ಮಾಡಬೇಕಿತ್ತು. ಆಗ ಕೆಲವು ಜಿಲ್ಲೆಗಳಿಗೆ ನೀರು ಪೂರೈಕೆ ಆಗುತ್ತಿತ್ತು. ಅದರ ಬದಲು ಬೇಕಾಬಿಟ್ಟಿ ಟೆಂಡರ್ ಕರೆದು ಯೋಜನಾ ಮೊತ್ತವನ್ನು ಹಿಗ್ಗಿಸಲಾಗಿದೆ. ಭೂಸ್ವಾಧೀನ ಮಾಡದೆಯೇ ಟೆಂಡರ್ ಕರೆಯಲಾಗಿದೆ. ಈ ವಿಷಯಗಳ ಬಗ್ಗೆ ವರದಿಯಲ್ಲಿ ಪ್ರಸ್ತಾಪಿಸುವಂತೆ ಸೂಚಿಸಿದ್ದಾರೆ’ ಎಂದು ಮೂಲಗಳು ಹೇಳಿವೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>