ಆಧಾರ್ ಯೋಜನೆಯನ್ನು ‘ಒಂದು ದೇಶ, ಒಂದು ಗುರುತು’ ಎಂದು ಹೇಳುತ್ತಿರುವುದರಿಂದಾಗಿ ಅದು ಇಲ್ಲದೆ ತಮ್ಮ ಗುರುತು ಸಾಬೀತುಪಡಿಸಲು ಜನರಿಗೆ ಕಷ್ಟವಾಗುತ್ತದೆ ಎಂದು ಪಶ್ಚಿಮ ಬಂಗಾಳ ಸರ್ಕಾರದ ಪರವಾಗಿ ವಾದಿಸುತ್ತಿರುವ ಹಿರಿಯ ವಕೀಲ ಕಪಿಲ್ ಸಿಬಲ್ ಹೇಳಿದರು. ಆದರೆ ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ ನೇತೃತ್ವದ ಸಂವಿಧಾನ ಪೀಠ ಈ ವಾದವನ್ನು ಒಪ್ಪಿಕೊಳ್ಳಲಿಲ್ಲ.