ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೀಲಾರದ ಶಿವರಾಮುಗೆ ಅಂತರರಾಷ್ಟ್ರೀಯ ಯಂಗ್ ಇನ್ವೆಸ್ಟಿಗೇಟರ್ ಪ್ರಶಸ್ತಿ

Last Updated 13 ಜೂನ್ 2020, 13:47 IST
ಅಕ್ಷರ ಗಾತ್ರ

ಕೆರಗೋಡು: ಅಹಾರ ಸಂರಕ್ಷಣೆ ಅಂತರರಾಷ್ಟ್ರೀಯ ಒಕ್ಕೂಟ (ಐಎಎಫ್‌ಪಿ) ಕೊಡಮಾಡುವ ಯುವ ಸಂಶೋಧಕ ಪ್ರಶಸ್ತಿಗೆ ಮಂಡ್ಯ ತಾಲ್ಲೂಕಿನ ಕೀಲಾರದ ಕೆ.ವಿ.ಶಿವರಾಮು ಆಯ್ಕೆಯಾಗಿದ್ದಾರೆ.

ಅವರು ಅಮೆರಿಕದ ಎನ್‌ಸಿ ವೆಟನರಿ ಮೆಡಸಿನ್ ಕಾಲೇಜಿನ ಜನಸಂಖ್ಯೆ ಆರೋಗ್ಯ ವಿಭಾಗದ ಪ್ರಾಧ್ಯಾಪಕ ಆಗಿದ್ದು, ಪ್ರಶಸ್ತಿಯನ್ನು ಫ್ರಾನ್ಸ್ ಮೂಲದ ಕಂಪನಿ ಪ್ರಾಯೋಜಕತ್ವ ಮಾಡುತ್ತಿದೆ. ಪ್ರಶಸ್ತಿ ಮೊತ್ತ 10,000 ಯೂರೊ (₹8.56 ಲಕ್ಷ) ಆಗಿದೆ.

ಆಹಾರ ಭದ್ರತೆ ಮತ್ತು ಮೈಕ್ರೊ ಬ್ಯಾಕ್ಟೀರಿಯ ಕುರಿತ ಸಂಶೋಧನೆಗೆ ಈ ಪ್ರಶಸ್ತಿ ನೀಡಲಾಗಿದೆ. ಕೃಷಿ ವಿಜ್ಞಾನಿಯಾಗಿಯೂ ಗುರುತಿಸಿಕೊಂಡಿದ್ದು ಆಹಾರ ಜನ್ಯ ರೋಗಗಳ ಸಂಶೋಧನೆಯನ್ನೂ ಮಾಡುತ್ತಿರುವುದಾಗಿ ಶಿವರಾಮು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT