<p><strong>ಬೆಂಗಳೂರು:</strong> ‘ದೇವರಿಗೆ ಪೂಜೆ ಮಾಡಿದರೆ ಚಿನ್ನಾಭರಣಗಳು ದ್ವಿಗುಣವಾಗುತ್ತವೆ’ ಎಂದು ಹೇಳಿ ನಗರದ ಮಹಿಳೆಯೊಬ್ಬರನ್ನು ನಂಬಿಸಿದ್ದ ವಂಚಕನೊಬ್ಬ, ಪೂಜೆ ಮಾಡುವ ನೆಪದಲ್ಲಿ ಅಪಾರ ಪ್ರಮಾಣದ ಚಿನ್ನಾಭರಣ ಕದ್ದೊಯ್ದಿದ್ದಾನೆ.</p>.<p>ಈ ಸಂಬಂಧ 48 ವರ್ಷದ ಮಹಿಳೆ ಕೆ.ಜಿ.ಹಳ್ಳಿ ಠಾಣೆಗೆ ದೂರು ನೀಡಿದ್ದಾರೆ. ಅದರನ್ವಯ ಅಫ್ಸರ್ ಅಲಿಯಾಸ್ ಬಾಬಾ ಎಂಬಾತನ ವಿರುದ್ಧ ಎಫ್ಐಆರ್ ದಾಖಲಾಗಿದೆ.</p>.<p>‘ಕಳೆದ ಡಿ. 5ರಂದು ಮಹಿಳೆಯ ಮನೆಗೆ ಬಂದಿದ್ದ ಆರೋಪಿ, ತನ್ನ ಹೆಸರು ಅಫ್ಸರ್ ಅಲಿಯಾಸ್ ಬಾಬಾ ಎಂದು ಪರಿಚಯಿಸಿಕೊಂಡಿದ್ದ. ಮೈಸೂರಿನಲ್ಲಿ ವಾಸವಿರುವುದಾಗಿ ಹೇಳಿದ್ದ. ಬಾಬಾ ಎಂದಿದ್ದಕ್ಕೆ ಮಹಿಳೆಯು ಆತನನ್ನು ನಂಬಿದ್ದರು’ ಎಂದು ಪೊಲೀಸರು ಹೇಳಿದರು.</p>.<p>‘ದೇವರ ಪೂಜೆ ಮಾಡಿ ಹಲವರಿಗೆ ಚಿನ್ನಾಭರಣ ದ್ವಿಗುಣ ಮಾಡಿಕೊಟ್ಟಿದ್ದೇನೆ. ಇದೀಗ ದೇವರೇ ನನ್ನನ್ನು ನಿಮ್ಮ ಬಳಿ ಕಳುಹಿಸಿದ್ದಾನೆ. ನೀವು ಆಭರಣ ಕೊಟ್ಟರೆ ದ್ವಿಗುಣ ಮಾಡಿಕೊಡುತ್ತೇನೆ’ ಎಂದು ಆರೋಪಿ ಹೇಳಿದ್ದ. ಅದಕ್ಕೆ ಒಪ್ಪಿದ್ದ ಮಹಿಳೆ, ಪೂಜೆಗೆ ಅನುಕೂಲ ಮಾಡಿಕೊಟ್ಟಿದ್ದರು.’</p>.<p>‘ಮಹಿಳೆಯ ಚಿನ್ನಾಭರಣವನ್ನು ಬ್ಯಾಗ್ನಲ್ಲಿ ಹಾಕಿದ್ದ ಆರೋಪಿ, ಅದನ್ನೇ ತನ್ನ ಮುಂದಿಟ್ಟುಕೊಂಡು ರಾತ್ರಿಯಿಡಿ ಪೂಜೆ ಮಾಡಿದ್ದ. ನಸುಕಿನಲ್ಲಿ ಪೂಜೆ ಮುಗಿಸಿದ್ದ ಆರೋಪಿ, ‘ಮೂರು ದಿನ ಬಿಟ್ಟು ಬ್ಯಾಗ್ ತೆಗೆದು ನೋಡಿ. ಚಿನ್ನಾಭರಣ ದ್ವಿಗುಣವಾಗಿರುತ್ತದೆ’ ಎಂದು ಹೇಳಿ ಅಲ್ಲಿಂದ ಹೊರಟು ಹೋಗಿದ್ದ. ಈ ಬಗ್ಗೆ ಮಹಿಳೆಯೇ ದೂರಿನಲ್ಲಿ ತಿಳಿಸಿದ್ದಾರೆ’ ಎಂದು ಪೊಲೀಸರು ಹೇಳಿದರು.</p>.<p>‘ಡಿ. 8ರಂದು ಮಹಿಳೆಯು ಬ್ಯಾಗ್ ತೆಗೆದು ನೋಡಿದ್ದರು. ಅದರಲ್ಲಿ ಆಭರಣಗಳು ಇರಲಿಲ್ಲ. ನಿಂಬೆಹಣ್ಣುಗಳು ಮಾತ್ರ ಇದ್ದವು. ಅವಾಗಲೇ ಅವರಿಗೆ ವಂಚನೆಗೀಡಾಗಿದ್ದು ಗೊತ್ತಾಗಿದೆ. ಬಳಿಕ ಠಾಣೆಗೆ ಬಂದು ದೂರು ನೀಡಿದ್ದಾರೆ’ ಎಂದು ವಿವರಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು:</strong> ‘ದೇವರಿಗೆ ಪೂಜೆ ಮಾಡಿದರೆ ಚಿನ್ನಾಭರಣಗಳು ದ್ವಿಗುಣವಾಗುತ್ತವೆ’ ಎಂದು ಹೇಳಿ ನಗರದ ಮಹಿಳೆಯೊಬ್ಬರನ್ನು ನಂಬಿಸಿದ್ದ ವಂಚಕನೊಬ್ಬ, ಪೂಜೆ ಮಾಡುವ ನೆಪದಲ್ಲಿ ಅಪಾರ ಪ್ರಮಾಣದ ಚಿನ್ನಾಭರಣ ಕದ್ದೊಯ್ದಿದ್ದಾನೆ.</p>.<p>ಈ ಸಂಬಂಧ 48 ವರ್ಷದ ಮಹಿಳೆ ಕೆ.ಜಿ.ಹಳ್ಳಿ ಠಾಣೆಗೆ ದೂರು ನೀಡಿದ್ದಾರೆ. ಅದರನ್ವಯ ಅಫ್ಸರ್ ಅಲಿಯಾಸ್ ಬಾಬಾ ಎಂಬಾತನ ವಿರುದ್ಧ ಎಫ್ಐಆರ್ ದಾಖಲಾಗಿದೆ.</p>.<p>‘ಕಳೆದ ಡಿ. 5ರಂದು ಮಹಿಳೆಯ ಮನೆಗೆ ಬಂದಿದ್ದ ಆರೋಪಿ, ತನ್ನ ಹೆಸರು ಅಫ್ಸರ್ ಅಲಿಯಾಸ್ ಬಾಬಾ ಎಂದು ಪರಿಚಯಿಸಿಕೊಂಡಿದ್ದ. ಮೈಸೂರಿನಲ್ಲಿ ವಾಸವಿರುವುದಾಗಿ ಹೇಳಿದ್ದ. ಬಾಬಾ ಎಂದಿದ್ದಕ್ಕೆ ಮಹಿಳೆಯು ಆತನನ್ನು ನಂಬಿದ್ದರು’ ಎಂದು ಪೊಲೀಸರು ಹೇಳಿದರು.</p>.<p>‘ದೇವರ ಪೂಜೆ ಮಾಡಿ ಹಲವರಿಗೆ ಚಿನ್ನಾಭರಣ ದ್ವಿಗುಣ ಮಾಡಿಕೊಟ್ಟಿದ್ದೇನೆ. ಇದೀಗ ದೇವರೇ ನನ್ನನ್ನು ನಿಮ್ಮ ಬಳಿ ಕಳುಹಿಸಿದ್ದಾನೆ. ನೀವು ಆಭರಣ ಕೊಟ್ಟರೆ ದ್ವಿಗುಣ ಮಾಡಿಕೊಡುತ್ತೇನೆ’ ಎಂದು ಆರೋಪಿ ಹೇಳಿದ್ದ. ಅದಕ್ಕೆ ಒಪ್ಪಿದ್ದ ಮಹಿಳೆ, ಪೂಜೆಗೆ ಅನುಕೂಲ ಮಾಡಿಕೊಟ್ಟಿದ್ದರು.’</p>.<p>‘ಮಹಿಳೆಯ ಚಿನ್ನಾಭರಣವನ್ನು ಬ್ಯಾಗ್ನಲ್ಲಿ ಹಾಕಿದ್ದ ಆರೋಪಿ, ಅದನ್ನೇ ತನ್ನ ಮುಂದಿಟ್ಟುಕೊಂಡು ರಾತ್ರಿಯಿಡಿ ಪೂಜೆ ಮಾಡಿದ್ದ. ನಸುಕಿನಲ್ಲಿ ಪೂಜೆ ಮುಗಿಸಿದ್ದ ಆರೋಪಿ, ‘ಮೂರು ದಿನ ಬಿಟ್ಟು ಬ್ಯಾಗ್ ತೆಗೆದು ನೋಡಿ. ಚಿನ್ನಾಭರಣ ದ್ವಿಗುಣವಾಗಿರುತ್ತದೆ’ ಎಂದು ಹೇಳಿ ಅಲ್ಲಿಂದ ಹೊರಟು ಹೋಗಿದ್ದ. ಈ ಬಗ್ಗೆ ಮಹಿಳೆಯೇ ದೂರಿನಲ್ಲಿ ತಿಳಿಸಿದ್ದಾರೆ’ ಎಂದು ಪೊಲೀಸರು ಹೇಳಿದರು.</p>.<p>‘ಡಿ. 8ರಂದು ಮಹಿಳೆಯು ಬ್ಯಾಗ್ ತೆಗೆದು ನೋಡಿದ್ದರು. ಅದರಲ್ಲಿ ಆಭರಣಗಳು ಇರಲಿಲ್ಲ. ನಿಂಬೆಹಣ್ಣುಗಳು ಮಾತ್ರ ಇದ್ದವು. ಅವಾಗಲೇ ಅವರಿಗೆ ವಂಚನೆಗೀಡಾಗಿದ್ದು ಗೊತ್ತಾಗಿದೆ. ಬಳಿಕ ಠಾಣೆಗೆ ಬಂದು ದೂರು ನೀಡಿದ್ದಾರೆ’ ಎಂದು ವಿವರಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>