2015–16ರಲ್ಲಿ ಶಾಂತವೀರ ಸ್ವಾಮೀಜಿ ನೇತೃತ್ವದಲ್ಲಿ 52 ಜನರ ನಿಯೋಗದೊಂದಿಗೆ ದೆಹಲಿಗೆ ತೆರಳಿ ಕುಂಚಿಟಿಗರನ್ನು ಒಬಿಸಿಗೆ ಸೇರ್ಪಡೆ ಮಾಡುವಂತೆ ಕೇಂದ್ರಕ್ಕೆ ಮನವಿ ಸಲ್ಲಿಸಲಾಗಿತ್ತು. ಈಚೆಗೆ ವಿವಿಧ ಮಠಾಧೀಶರೊಂದಿಗೆ ದೆಹಲಿಗೆ ತೆರಳಿದ್ದ ಶ್ರೀಗಳು ಮತ್ತೆ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷರನ್ನು ಭೇಟಿ ಮಾಡಿ ದ್ದರು. ಕುಂಚಿಟಿಗರನ್ನು ಒಬಿಸಿಗೆ ಸೇರ್ಪಡೆ ಮಾಡುವಂತೆ ಒತ್ತಾಯಮಾಡಿ
ದ್ದರು. ಜೊತೆಗೆ ಈ ಬಾರಿ ಸಮುದಾಯದ ಕುಲತಿಲಕ ಬನುಮಯ್ಯ ಜಯಂತಿಯನ್ನು ದೆಹಲಿಯಲ್ಲಿಯೇ ಆಚರಿಸಿದ್ದರು. ಸಮುದಾಯದ ಅಭಿವೃದ್ಧಿಗೆ ಮಾಜಿ ಸಚಿವ ಜಯಚಂದ್ರ, ಡಾ.ಅಂಜನಪ್ಪ, ಮುಖಂಡ ರಾಮಾಂಜನಪ್ಪ ಅವರ ಶ್ರಮವೂ ಇದೆ ಎಂದರು.