ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲಾಕ್‌ಡೌನ್‌ ಹಿನ್ನೆಲೆ: ನಡೆದುಕೊಂಡೇ ರಾಜ್ಯಕ್ಕೆ ಮರಳಿದ ಕೂಲಿ-ಕಾರ್ಮಿಕರು

Last Updated 28 ಮಾರ್ಚ್ 2020, 10:55 IST
ಅಕ್ಷರ ಗಾತ್ರ

ಬೆಳಗಾವಿ: ನೆರೆಯ ಮಹಾರಾಷ್ಟ್ರ ಹಾಗೂ ಗೋವಾಕ್ಕೆ ದಿನಗೂಲಿ ಮಾಡಲು ಹೋಗಿದ್ದ ಹಲವು ಕಾರ್ಮಿಕರು ಕೊರೊನಾ ಭೀತಿಯಿಂದ ರಾಜ್ಯಕ್ಕೆ ಮರಳುತ್ತಿದ್ದಾರೆ. ಬಸ್‌ ಹಾಗೂ ಇತರ ವಾಹನಗಳ ಸಂಚಾರದ ಮೇಲೆ ನಿಷೇಧ ಹೇರಿರುವುದರಿಂದ ಇವರು ನಡೆದುಕೊಂಡೇ ಸಂಚರಿಸುತ್ತಿದ್ದಾರೆ. ಬೆಳಗಾವಿ ಮೂಲಕ ತಮ್ಮ ತಮ್ಮ ನಗರಗಳತ್ತ ಪ್ರಯಾಣ ಬೆಳೆಸಿದ್ದಾರೆ.

ಇಲ್ಲಿನ ಸಾಂಬ್ರಾ, ಮೋದಗಾ, ರಸ್ತೆಯ ಮೇಲೆ ಇಂತಹ ಹಲವು ಯುವಕರು ನಡೆದುಕೊಂಡು ಸಾಗುತ್ತಿರುವ ದೃಶ್ಯ ಶನಿವಾರ ಕಂಡುಬಂದಿತು. 3–4 ಜನರ ತಂಡವನ್ನು ಕಟ್ಟಿಕೊಂಡು, ಬೆನ್ನಿಗೆ ಬ್ಯಾಗ್‌ ಹಾಕಿಕೊಂಡು ಸಾಗುತ್ತಿದ್ದರು.

ಮಹಾರಾಷ್ಟ್ರದ ಕರಾಡ, ಕೊಲ್ಹಾಪುರ ಹಾಗೂ ಗೋವಾದಿಂದ ಕಣಕುಂಬಿ, ಜಾಂಬೋಟಿ ಮಾರ್ಗದ ಮೂಲಕ ಇವರು ಆಗಮಿಸಿದ್ದಾರೆ. ರಸ್ತೆಯ ಅಕ್ಕಪಕ್ಕದ ಗ್ರಾಮಗಳ ಜನರಿಂದ ಕುಡಿಯುವ ನೀರು ಹಾಗೂ ತಿಂಡಿ, ಆಹಾರ ಪಡೆದು ಸೇವಿಸಿ, ಮುಂದೆ ಸಾಗಿದರು. ಇವರಲ್ಲಿ ಬಹುತೇಕರು ರಾಯಚೂರು, ಯಾದಗಿರಿ ಜಿಲ್ಲೆಯವರೆಂದು ಹೇಳಲಾಗುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT