‘ಕರ್ನಾಟಕ ಭೂ ಕಂದಾಯ ಕಾಯ್ದೆಯ ಕಲಂ 129ರ ಅನುಸಾರ ಸ್ಥಿರಾಸ್ತಿ ವ್ಯಾಜ್ಯಗಳಲ್ಲಿ ಹಕ್ಕುದಾರಿಕೆಯ ಅಧಿಕಾರವನ್ನು ನಿರ್ಧರಿಸುವ ತಹಶೀಲ್ದಾರ್ ಆದೇಶ ಪ್ರಶ್ನಿಸಿ ವ್ಯಾಜ್ಯಕರ್ತರು, ಉಪವಿಭಾಗಾಧಿಕಾರಿ ಅಥವಾ ಜಿಲ್ಲಾಧಿಕಾರಿಗೆ ಮೇಲ್ಮನವಿ ಸಲ್ಲಿಸುವ ಬದಲಿಗೆ ನೇರವಾಗಿ ಸಕ್ಷಮ ಪ್ರಾಧಿಕಾರವಾದ ಸಿವಿಲ್ ಕೋರ್ಟ್ ಮೊರೆ ಹೋಗಬಹುದು. ಸಿವಿಲ್ ಕೋರ್ಟ್ ನೀಡುವ ಡಿಕ್ರಿ ಅನುಸಾರವೇ ಸ್ವತ್ತಿನ ಹಕ್ಕುದಾರಿಕೆ ಮಾನ್ಯವಾಗುತ್ತದೆ’ ಎಂದು ತೀರ್ಪಿನಲ್ಲಿ ವಿವರಿಸಲಾಗಿದೆ.