ರಾಯಚೂರು: ನರೇಂದ್ರ ಮೋದಿ ಅವರು ಮತ್ತೊಮ್ಮೆ ಪ್ರಧಾನಮಂತ್ರಿ ಆಗುತ್ತಿರುವುದಕ್ಕೆ ಸಂತುಷ್ಟಗೊಂಡು ಅಂಗವಿಕಲನೊಬ್ಬ ವೀರಭದ್ರೇಶ್ವರನಿಗೆ ಸೋಮವಾರ ದೀರ್ಘದಂಡ ನಮಸ್ಕಾರ ಹಾಕಿ ಗಮನ ಸೆಳೆದಿದ್ದಾರೆ.
ಜಿಲ್ಲೆಯ ಸಿರವಾರ ತಾಲ್ಲೂಕಿನ ಬಸಾಪುರ ಗ್ರಾಮದ ಮುದ್ದಪ್ಪ ಛಲವಾದಿ ಅವರು, ‘ಮೋದಿ ಮತ್ತೊಮ್ಮೆ ಪ್ರಧಾನಿಯಾಗಲಿ ಎಂದು ವೀರೇಶ್ವರನಿಗೆ ಹರಕೆ ಕಟ್ಟಿಕೊಂಡಿದ್ದರು. ಅದರಂತೆ, ಗ್ರಾಮಸ್ಥರ ಸಮ್ಮುಖದಲ್ಲಿ ರಾರಾಜಿಸುವ ಬಿಜೆಪಿ ಧ್ವಜವನ್ನು ಮುಂದೆ ಮಾಡಿಕೊಂಡು ದೀರ್ಘದಂಡ ನಮಸ್ಕಾರ ಹಾಕಿದರು.