ಅಹಿಂಸಾ ಧರ್ಮವನ್ನು ಪಾಲಿಸುತ್ತಿದ್ದ ಅವರು ತಮ್ಮ ಭಕ್ತರಿಗೆ ಪಶು ಪಕ್ಷಿಗಳನ್ನು ಕೊಲ್ಲದಂತೆ ಉಪದೇಶ ನೀಡಿದ್ದರು.
ಇತ್ತೀಚೆಗೆ ಯಾನಾಗಾಂದಿ ಪೀಠದ ಟ್ರಸ್ಟ್ ಕಮಿಟಿಯವರು ಅವರ ಆರೋಗ್ಯ ಸರಿಯಾಗಿ ನೋಡಿಕೊಳ್ಳುತ್ತಿಲ್ಲ ಎಂದು ಆರೋಪಿಸಿ ಸೇಡಂನ ಶಿವಕುಮಾರ ನಿಡಗುಂದಾ ಎಂಬುವವರು ಹೈಕೋರ್ಟ್ ಮೆಟ್ಟಿಲೇರಿದ್ದರು.
ಹೈಕೋರ್ಟ್ ಸೂಚನೆ ಮೇರೆಗೆ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅವರು ಜಿಲ್ಲಾ ಆರೋಗ್ಯಾಧಿಕಾರಿಗಳ ತಂಡದೊಂದಿಗೆ ತೆರಳಿ ಆರೋಗ್ಯ ತಪಾಸಣೆ ಮಾಡಿದ್ದರು.
ಮಾತೆ ಮಾಣಿಕೇಶ್ವರಿ ಅವರನ್ನು ನೋಡಿಕೊಳ್ಳಲು ಮಹಿಳೆಯೊಬ್ಬರನ್ನು ನಿಯೋಜಿಸಲಾಗಿದೆ ಎಂದು ಯಾನಾಗುಂದಿ ಪೀಠದ ಆಡಳಿತಾಧಿಕಾರಿ ಹೈಕೋರ್ಟ್ ಗೆ ಪ್ರಮಾಣಪತ್ರ ಸಲ್ಲಿಸಿದ್ದರು.