<p><strong>ಬೆಂಗಳೂರು</strong>: ಪೊಲೀಸ್ ಠಾಣೆಗಳಲ್ಲಿ ಇರುವ ಕೆಲ ಸಿಬ್ಬಂದಿಗೆ ಸೈಬರ್ ಅಪರಾಧದ ತನಿಖೆ ನಡೆಸಲು ಸಹಕಾರಿ ಆಗುವಂತೆ ತರಬೇತಿ ನೀಡಲು ಉದ್ದೇಶಿಸಲಾಗಿದೆ ಎಂದು ಗೃಹ ಸಚಿವ ಎಂ.ಬಿ.ಪಾಟೀಲ ಶುಕ್ರವಾರ ಹೇಳಿದರು.</p>.<p>ಇತ್ತೀಚಿನ ದಿನಗಳಲ್ಲಿ ಸೈಬರ್ ಅಪರಾಧಗಳು ಹೆಚ್ಚುತ್ತಿದ್ದು, ಸಿಬ್ಬಂದಿಗೆ ತರಬೇತಿ ಇದ್ದರೆ ತನಿಖೆಗೆ ನೆರವಾಗಲಿದೆ. ಹೊರ ರಾಜ್ಯ ಹಾಗೂ ಇತರೆಡೆಯ ತನಿಖಾ ವಿಧಾನಗಳು, ತಂತ್ರಜ್ಞಾನದ ಮಾಹಿತಿ ಆಧರಿಸಿ ತರಬೇತಿ ನೀಡಲಾಗುತ್ತದೆ. ಅಗತ್ಯ ಸಿಬ್ಬಂದಿಯನ್ನೂ ನೇಮಕ ಮಾಡಿಕೊಳ್ಳಲಾಗುವುದು ಎಂದು ಅವರು ಸುದ್ದಿಗಾರರಿಗೆ ತಿಳಿಸಿದರು.</p>.<p>ಪ್ರತಿ ಠಾಣೆಯಲ್ಲೂ ಇಬ್ಬರು ಸಬ್ಇನ್ಸ್ಪೆಕ್ಟರ್ ಇರುವಂತೆ ನೋಡಿಕೊಳ್ಳಲಾಗುವುದು. ಒಬ್ಬರು ಕಾನೂನು ಸುವ್ಯವಸ್ಥೆಗೆ ಹಾಗೂ ಮತ್ತೊಬ್ಬರು ಅಪರಾಧಗಳ ತನಿಖೆ ನಡೆಸಲಿದ್ದಾರೆ. ಕೆಲವು ಠಾಣೆಗಳಲ್ಲಿ ಇಬ್ಬರು ಎಸ್.ಐಗಳು ಕಾರ್ಯನಿರ್ವಹಿಸುತ್ತಿದ್ದು, ಉಳಿದ ಠಾಣೆಗಳಿಗೂ ನಿಯೋಜಿಸಲಾಗುವುದು. ಖಾಲಿ ಸ್ಥಾನಗಳಿಗೆ ನೇಮಕಾತಿ ಮಾಡಿಕೊಳ್ಳಲಾಗುತ್ತದೆ ಎಂದು ವಿವರಿಸಿದರು.</p>.<p>‘ನಿರ್ಭಯ ಯೋಜನೆ’ಯಲ್ಲಿ ಪೊಲೀಸ್ ವ್ಯವಸ್ಥೆಯನ್ನು ಬಲಪಡಿಸಿ, ಆಧುನಿಕ ತಂತ್ರಜ್ಞಾನ ಸೌಕರ್ಯಗಳನ್ನು ಕಲ್ಪಿಸಲಾಗುವುದು. ಸಿ.ಸಿ ಟಿ.ವಿ ಅಳವಡಿಕೆ, ಆ ದೃಶ್ಯಗಳ ವಿಶ್ಲೇಷಣೆಯಿಂದ ಹಿಡಿದು ವಿಶ್ವದ ಇತರೆ ಭಾಗಗಳಲ್ಲಿ ಅಪರಾಧಗಳ ತನಿಖೆಗೆ ಅಳವಡಿಸಿಕೊಂಡಿರುವ ತಂತ್ರಜ್ಞಾನದ ಅಧ್ಯಯನ, ನಮಗೆ ಹೊಂದುವಂತೆ ಅದರ ಅಳವಡಿಕೆ ಬಗ್ಗೆ ಕ್ರಮ ಕೈಗೊಳ್ಳಲಾಗಿದೆ. ಜಾಗತಿಕ ಮಟ್ಟದ ಸಂಸ್ಥೆಗಳ ಜತೆಗೂ ಚರ್ಚಿಸಲಾಗಿದ್ದು, ಅಂತಹ ಸಂಸ್ಥೆಗಳ ಜತೆಗೂ ಒಪ್ಪಂದ ಮಾಡಿಕೊಳ್ಳಲಾಗುವುದು’ ಎಂದರು.</p>.<p><strong>ಔರಾದಕರ ವರದಿ:</strong>ಪೊಲೀಸ್ ಸಿಬ್ಬಂದಿ ವೇತನ ತಾರತಮ್ಯ ನಿವಾರಣೆ ಸೇರಿದಂತೆ ಇಲಾಖೆಯ ಸುಧಾರಣೆಗೆ ಸಂಬಂಧಿಸಿ ರಾಘವೇಂದ್ರ ಔರಾದಕರ ನೀಡಿರುವ ವರದಿ ಜಾರಿ ಮಾಡಲಾಗುವುದು. ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಜತೆಮುಂದಿನ ವಾರ ಈ ಬಗ್ಗೆ ಚರ್ಚಿಸಿದ ನಂತರ ಕ್ರಮ ವಹಿಸಲಾಗುವುದು ಎಂದು ಹೇಳಿದರು.</p>.<p><strong>‘ಗೌರವಯುತವಾಗಿ ಸುಮ್ಮನಿರಲಿ’</strong><br />‘ಆಪರೇಷನ್ ಕಮಲ’ ಹೆಸರು ಹೇಳಿಕೊಂಡು ಬಿಜೆಪಿ ಮುಖಂಡರು ಹಾಗೂ ಬಿ.ಎಸ್.ಯಡಿಯೂರಪ್ಪ ಅಪಹಾಸ್ಯಕ್ಕೆ ಗುರಿಯಾಗಿದ್ದಾರೆ. ಇನ್ನು ಮುಂದಾದರೂ ಇಂತಹ ಪ್ರಯತ್ನ ಬಿಟ್ಟು ಗೌರವಯುತವಾಗಿ ಇರಬೇಕು ಎಂದು ಎಂ.ಬಿ.ಪಾಟೀಲ್ ಅಸಮಾಧಾನ ಹೊರ ಹಾಕಿದರು.</p>.<p>ಬಿಜೆಪಿಯವರು ಬಯಸಿದಷ್ಟು ಶಾಸಕರು ಕಾಂಗ್ರೆಸ್ನಿಂದ ಹೋಗುತ್ತಿಲ್ಲ. ಇನ್ನೂ ನಾಲ್ಕು ವರ್ಷಗಳ ಕಾಲ ಆಪರೇಷನ್ ಕಮಲದ ಹೆಸರು ಮುಂದುವರಿಯುತ್ತದೆ. ಅದರಿಂದ ಯಾವುದೇ ಪ್ರಯೋಜನವಿಲ್ಲ ಎಂದು ತಿಳಿಸಿದರು.</p>.<p>ಸಂಪುಟ ವಿಸ್ತರಣೆ, ಪುನರ್ ರಚನೆ ಸೇರಿದಂತೆ ಹೈಕಮಾಂಡ್ ಯಾವುದೇ ನಿರ್ಧಾರ ಕೈಗೊಂಡರೂ ಅದಕ್ಕೆ ಕಾಂಗ್ರೆಸ್ನ ಎಲ್ಲ ಸಚಿವರು ಬದ್ದರಾಗಿದ್ದು, ಒಗ್ಗಟ್ಟಿನಿಂದ ಇದ್ದೇವೆ. ಕೆಪಿಸಿಸಿ ಅಧ್ಯಕ್ಷ ಸ್ಥಾನ ಈಗ ಖಾಲಿ ಇಲ್ಲದಿರುವುದರಿಂದ, ಆ ಬಗ್ಗೆ ಪ್ರತಿಕ್ರಿಯಿಸುವುದಿಲ್ಲ ಎಂದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು</strong>: ಪೊಲೀಸ್ ಠಾಣೆಗಳಲ್ಲಿ ಇರುವ ಕೆಲ ಸಿಬ್ಬಂದಿಗೆ ಸೈಬರ್ ಅಪರಾಧದ ತನಿಖೆ ನಡೆಸಲು ಸಹಕಾರಿ ಆಗುವಂತೆ ತರಬೇತಿ ನೀಡಲು ಉದ್ದೇಶಿಸಲಾಗಿದೆ ಎಂದು ಗೃಹ ಸಚಿವ ಎಂ.ಬಿ.ಪಾಟೀಲ ಶುಕ್ರವಾರ ಹೇಳಿದರು.</p>.<p>ಇತ್ತೀಚಿನ ದಿನಗಳಲ್ಲಿ ಸೈಬರ್ ಅಪರಾಧಗಳು ಹೆಚ್ಚುತ್ತಿದ್ದು, ಸಿಬ್ಬಂದಿಗೆ ತರಬೇತಿ ಇದ್ದರೆ ತನಿಖೆಗೆ ನೆರವಾಗಲಿದೆ. ಹೊರ ರಾಜ್ಯ ಹಾಗೂ ಇತರೆಡೆಯ ತನಿಖಾ ವಿಧಾನಗಳು, ತಂತ್ರಜ್ಞಾನದ ಮಾಹಿತಿ ಆಧರಿಸಿ ತರಬೇತಿ ನೀಡಲಾಗುತ್ತದೆ. ಅಗತ್ಯ ಸಿಬ್ಬಂದಿಯನ್ನೂ ನೇಮಕ ಮಾಡಿಕೊಳ್ಳಲಾಗುವುದು ಎಂದು ಅವರು ಸುದ್ದಿಗಾರರಿಗೆ ತಿಳಿಸಿದರು.</p>.<p>ಪ್ರತಿ ಠಾಣೆಯಲ್ಲೂ ಇಬ್ಬರು ಸಬ್ಇನ್ಸ್ಪೆಕ್ಟರ್ ಇರುವಂತೆ ನೋಡಿಕೊಳ್ಳಲಾಗುವುದು. ಒಬ್ಬರು ಕಾನೂನು ಸುವ್ಯವಸ್ಥೆಗೆ ಹಾಗೂ ಮತ್ತೊಬ್ಬರು ಅಪರಾಧಗಳ ತನಿಖೆ ನಡೆಸಲಿದ್ದಾರೆ. ಕೆಲವು ಠಾಣೆಗಳಲ್ಲಿ ಇಬ್ಬರು ಎಸ್.ಐಗಳು ಕಾರ್ಯನಿರ್ವಹಿಸುತ್ತಿದ್ದು, ಉಳಿದ ಠಾಣೆಗಳಿಗೂ ನಿಯೋಜಿಸಲಾಗುವುದು. ಖಾಲಿ ಸ್ಥಾನಗಳಿಗೆ ನೇಮಕಾತಿ ಮಾಡಿಕೊಳ್ಳಲಾಗುತ್ತದೆ ಎಂದು ವಿವರಿಸಿದರು.</p>.<p>‘ನಿರ್ಭಯ ಯೋಜನೆ’ಯಲ್ಲಿ ಪೊಲೀಸ್ ವ್ಯವಸ್ಥೆಯನ್ನು ಬಲಪಡಿಸಿ, ಆಧುನಿಕ ತಂತ್ರಜ್ಞಾನ ಸೌಕರ್ಯಗಳನ್ನು ಕಲ್ಪಿಸಲಾಗುವುದು. ಸಿ.ಸಿ ಟಿ.ವಿ ಅಳವಡಿಕೆ, ಆ ದೃಶ್ಯಗಳ ವಿಶ್ಲೇಷಣೆಯಿಂದ ಹಿಡಿದು ವಿಶ್ವದ ಇತರೆ ಭಾಗಗಳಲ್ಲಿ ಅಪರಾಧಗಳ ತನಿಖೆಗೆ ಅಳವಡಿಸಿಕೊಂಡಿರುವ ತಂತ್ರಜ್ಞಾನದ ಅಧ್ಯಯನ, ನಮಗೆ ಹೊಂದುವಂತೆ ಅದರ ಅಳವಡಿಕೆ ಬಗ್ಗೆ ಕ್ರಮ ಕೈಗೊಳ್ಳಲಾಗಿದೆ. ಜಾಗತಿಕ ಮಟ್ಟದ ಸಂಸ್ಥೆಗಳ ಜತೆಗೂ ಚರ್ಚಿಸಲಾಗಿದ್ದು, ಅಂತಹ ಸಂಸ್ಥೆಗಳ ಜತೆಗೂ ಒಪ್ಪಂದ ಮಾಡಿಕೊಳ್ಳಲಾಗುವುದು’ ಎಂದರು.</p>.<p><strong>ಔರಾದಕರ ವರದಿ:</strong>ಪೊಲೀಸ್ ಸಿಬ್ಬಂದಿ ವೇತನ ತಾರತಮ್ಯ ನಿವಾರಣೆ ಸೇರಿದಂತೆ ಇಲಾಖೆಯ ಸುಧಾರಣೆಗೆ ಸಂಬಂಧಿಸಿ ರಾಘವೇಂದ್ರ ಔರಾದಕರ ನೀಡಿರುವ ವರದಿ ಜಾರಿ ಮಾಡಲಾಗುವುದು. ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಜತೆಮುಂದಿನ ವಾರ ಈ ಬಗ್ಗೆ ಚರ್ಚಿಸಿದ ನಂತರ ಕ್ರಮ ವಹಿಸಲಾಗುವುದು ಎಂದು ಹೇಳಿದರು.</p>.<p><strong>‘ಗೌರವಯುತವಾಗಿ ಸುಮ್ಮನಿರಲಿ’</strong><br />‘ಆಪರೇಷನ್ ಕಮಲ’ ಹೆಸರು ಹೇಳಿಕೊಂಡು ಬಿಜೆಪಿ ಮುಖಂಡರು ಹಾಗೂ ಬಿ.ಎಸ್.ಯಡಿಯೂರಪ್ಪ ಅಪಹಾಸ್ಯಕ್ಕೆ ಗುರಿಯಾಗಿದ್ದಾರೆ. ಇನ್ನು ಮುಂದಾದರೂ ಇಂತಹ ಪ್ರಯತ್ನ ಬಿಟ್ಟು ಗೌರವಯುತವಾಗಿ ಇರಬೇಕು ಎಂದು ಎಂ.ಬಿ.ಪಾಟೀಲ್ ಅಸಮಾಧಾನ ಹೊರ ಹಾಕಿದರು.</p>.<p>ಬಿಜೆಪಿಯವರು ಬಯಸಿದಷ್ಟು ಶಾಸಕರು ಕಾಂಗ್ರೆಸ್ನಿಂದ ಹೋಗುತ್ತಿಲ್ಲ. ಇನ್ನೂ ನಾಲ್ಕು ವರ್ಷಗಳ ಕಾಲ ಆಪರೇಷನ್ ಕಮಲದ ಹೆಸರು ಮುಂದುವರಿಯುತ್ತದೆ. ಅದರಿಂದ ಯಾವುದೇ ಪ್ರಯೋಜನವಿಲ್ಲ ಎಂದು ತಿಳಿಸಿದರು.</p>.<p>ಸಂಪುಟ ವಿಸ್ತರಣೆ, ಪುನರ್ ರಚನೆ ಸೇರಿದಂತೆ ಹೈಕಮಾಂಡ್ ಯಾವುದೇ ನಿರ್ಧಾರ ಕೈಗೊಂಡರೂ ಅದಕ್ಕೆ ಕಾಂಗ್ರೆಸ್ನ ಎಲ್ಲ ಸಚಿವರು ಬದ್ದರಾಗಿದ್ದು, ಒಗ್ಗಟ್ಟಿನಿಂದ ಇದ್ದೇವೆ. ಕೆಪಿಸಿಸಿ ಅಧ್ಯಕ್ಷ ಸ್ಥಾನ ಈಗ ಖಾಲಿ ಇಲ್ಲದಿರುವುದರಿಂದ, ಆ ಬಗ್ಗೆ ಪ್ರತಿಕ್ರಿಯಿಸುವುದಿಲ್ಲ ಎಂದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>