ಶಿವನಸಮುದ್ರದಿಂದ ಆರಂಭಗೊಂಡು ರಾಜ್ಯದ ಗಡಿ ಭಾಗದ ತನಕ ಕಾವೇರಿ ನದಿ ಪಾತ್ರವನ್ನೇ ಬಳಸಿಕೊಂಡು ನಿರ್ಮಿಸುವ ಯೋಜನೆಯೇ ಮೇಕೆದಾಟು ನೀರಾವರಿ ಯೋಜನೆ. ಈ ಯೋಜನೆಗೆ ಒಟ್ಟು 5,252 ಹೆಕ್ಟೇರ್ ಜಮೀನು ಬೇಕು.ಇದರಲ್ಲಿ 4,996 ಹೆಕ್ಟೇರ್ ಮುಳುಗಡೆ ಪ್ರದೇಶವಾಗಲಿದ್ದು, ಇತರ 256 ಹೆಕ್ಟೇರ್ ಇತರ ನಿರ್ಮಾಣ ಕಾರ್ಯಗಳಿಗೆ ಬೇಕು. ಮುಳುಗಡೆಯಾಗುವ ಪ್ರದೇಶಗಳಲ್ಲಿ ಕಾವೇರಿ ವನ್ಯಜೀವಿ ಧಾಮದ 3,181 ಹೆಕ್ಟೇರ್, 1,869 ಹೆಕ್ಟೇರ್ ಮೀಸಲು ಅರಣ್ಯ ಪ್ರದೇಶ ಹಾಗೂ 201 ಹೆಕ್ಟೇರ್ ಕಂದಾಯ ಭೂಮಿ ಸೇರಿದೆ ಎಂದು ವಿವರಿಸಲಾಗಿದೆ.