ಕರ್ನಾಟಕವನ್ನು ದುಷ್ಯಾಶನನಿಗೆ, ಕೇಂದ್ರ ಸರ್ಕಾರವನ್ನು ದೃತರಾಷ್ಟ್ರನಿಗೆ ಹೋಲಿಸುವ ವ್ಯಂಗ್ಯಚಿತ್ರಗಳನ್ನು ಹಿಡಿದಿದ್ದರು. ‘ಮರಾಠಿ ಭಾಷಿಕರ ಮಾನ ಹರಣ ಮಾಡಿದ ಕರ್ನಾಟಕ ಸರ್ಕಾರ, ಅನ್ಯಾಯವನ್ನು ನೋಡುತ್ತಿರುವ ಮಹಾರಾಷ್ಟ್ರ, ಗಡಿ ವಿಚಾರದಲ್ಲಿ ಕೃಷ್ಣನ ಪಾತ್ರ ಯಾರದು?’ ಎಂದು ಪ್ರಶ್ನಿಸುವ ಬ್ಯಾನರ್ಗಳನ್ನು ಮಕ್ಕಳು, ಯುವಕರು ಹಿಡಿದಿದ್ದರು. ರಸ್ತೆಯುದ್ದಕ್ಕೂ ಭಗವಾಧ್ವಜಗಳು, ಕಪ್ಪು ಧ್ವಜಗಳನ್ನು ಹಾರಿಸಿದರು. ಶ್ರೀರಾಮನ ಪರ ಘೋಷಣೆಗಳು ಕೇಳಿಬಂದವು. ‘ಇದು ಬೆಳಗಾವಿ ಅಲ್ಲ, ಬೆಳಗಾಂವ’ ಎಂಬ ಫಲಕವೂ ಕಂಡುಬಂತು.