‘ಟಿಪ್ಪು ಸುಲ್ತಾನ್ ಜಯಂತಿ ಆಚರಿಸಿ ರಾಜಕೀಯವಾಗಿ ನಾನು ಹಾಳಾದೆ. ನಿಮಗೆ ಸೂಕ್ತ ಸ್ಥಾನಮಾನ ಕೊಡುತ್ತೇವೆ. ಮುಸ್ಲಿಮರನ್ನು ದೂರವಿಟ್ಟು, ಬ್ಯಾಡರು, ಮಾದಿಗರು ಹಾಗೂ ಹಿಂದೂಗಳ ಪರವಾಗಿ ಕೆಲಸ ಮಾಡಿ. ಚುನಾವಣೆಯಲ್ಲಿ ಗೆದ್ದ 24 ಗಂಟೆಯೊಳಗೆ ಮಂತ್ರಿ ಮಾಡುತ್ತೇವೆ ಎಂದು ಅಮಿತ್ ಶಾ ಭರವಸೆ ಕೊಟ್ಟಿದ್ದರು. ಆದರೆ, ಎಂಟು ದಿನಗಳು ಕಳೆದಿವೆ. ಅವರು ಮಾತಿಗೆ ತಕ್ಕಂತೆ ನಡೆದುಕೊಂಡಿಲ್ಲ. ನಾನು ಸೇರಿದಂತೆ 16 ಜನರಿಗೆ ಮಂತ್ರಿ ಮಾಡದಿದ್ದಲ್ಲಿ ಅದರ ಪರಿಣಾಮ ನೆಟ್ಟಗಿರುವುದಿಲ್ಲ’ ಎಂದು ಪತ್ರದಲ್ಲಿ ಎಚ್ಚರಿಕೆ ನೀಡಲಾಗಿದೆ. ಡಿ. 17ರಂದು ಪತ್ರ ಬರೆದಿರುವ ದಿನಾಂಕ ನಮೂದಾಗಿದೆ.