ಬೆಂಗಳೂರು: ಮದ್ಯದ ಅಮಲಿನಲ್ಲಿ ಸ್ನೇಹಿತರ ನಡುವೆಯೇ ಗಲಾಟೆ ಆಗಿ, ಶ್ರೀನಿವಾಸ್ (45) ಎಂಬುವರ ಕೊಲೆ ನಡೆದಿದೆ.
ಸೋಮವಾರ ಬೆಳಿಗ್ಗೆ ವೈನ್ ಮಳಿಗೆ ತೆರೆದ ಕೂಡಲೇ ಸರದಿಯಲ್ಲಿ ನಿಂತು ಮದ್ಯ ಖರೀದಿಸಿದ್ದ ಸ್ನೇಹಿತರು, ದೊಮ್ಮಲೂರಿನ ಬಳಿ ಕೊಠಡಿಗೆ ಹೋಗಿ ಪಾರ್ಟಿ ಮಾಡಿದ್ದರು. ಕೊಲೆಯಾದ ಶ್ರೀನಿವಾಸ ಹಾಗೂ ಅವರ ಸ್ನೇಹಿತ ಸಂತೋಷ್ ಮದ್ಯ ಕುಡಿದಿದ್ದರು. ಕ್ಷುಲ್ಲಕ ಕಾರಣಕ್ಕೆ ಜಗಳ ಶುರುವಾಗಿತ್ತು.