ಮಡಿಕೇರಿ: ಕಗ್ಗತ್ತಲು, ವನ್ಯಜೀವಿಗಳ ಉಪಟಳ, ಗಿಡಮರಗಳ ಸದ್ದು, ಮೈಮರಗಟ್ಟಿಸುವ ಚಳಿ, ಮಂಜಿನ ಹನಿ... ಕಾಫಿ ತೋಟದ ನಡುವೆ ಈ ರೀತಿಯ ವಾತಾವರಣದಲ್ಲಿ ವಯಸ್ಕರೇ ರಾತ್ರಿಯಿಡೀ ಕಾಲ ಕಳೆಯುವುದು ಕಷ್ಟ. ಅದರಲ್ಲೂ ಒಂದೂವರೆ ವರ್ಷದ ಕಂದಮ್ಮ ಕಗ್ಗತ್ತಲಲ್ಲಿ ಕಾಲ ಕಳೆದು ಸುರಕ್ಷಿತವಾಗಿ ಹೆತ್ತವರ ಮಡಿಲು ಸೇರಿದೆ. ವಿರಾಜಪೇಟೆ ತಾಲ್ಲೂಕಿನ ವೆಸ್ಟ್ನಮ್ಮಲೆ ಗ್ರಾಮದಲ್ಲಿ ಈ ಘಟನೆ ನಡೆದಿದೆ.