ಸದ್ಯ, ಬೆಳೆಗಳಿಗೆ ಸೂಕ್ತ ಬೆಲೆ ಸಿಗದೆ, ಹಾಕಿದ್ದ ಬಂಡವಾಳವೂ ಕೈಸೇರದ ಆತಂಕದಲ್ಲಿದ್ದಾರೆ. ಲಾಕ್ಡೌನ್ ಆರಂಭವಾದಾಗ ಸೀಬೆಕಾಯಿಗೆ ಉತ್ತಮ ಮಾರುಕಟ್ಟೆ ನಿರೀಕ್ಷೆಯಿಂದ ಜಿಲ್ಲಾಧಿಕಾರಿ ಕಚೇರಿಯ ಕಂಟ್ರೋಲ್ ರೂಮ್ ಸಂಪರ್ಕಿಸಿದರು. ಅಲ್ಲಿ ಹಾಪ್ಕಾಮ್ಸ್ ಅಧಿಕಾರಿಗಳನ್ನು ಸಂಪರ್ಕಿಸಲು ಸೂಚಿಸಲಾಯಿತು. ಅಲ್ಲಿಗೆ ಹೋದರೆ ಇಂಡೆಂಟ್ ಇಲ್ಲದೆ ಫಸಲು ಖರೀದಿಸುವುದಿಲ್ಲ ಎಂಬ ಉತ್ತರ ಬಂತು. ಆತ್ಮೀಯರ ಸಲಹೆ ಆಧರಿಸಿ ಮಾಲೂರು ಸೂಪರ್ ಮಾರುಕಟ್ಟೆ ಸಂಪರ್ಕಿಸಿದರು. ಅಲ್ಲಿ ಮೊದಲು ಹಿಂದೇಟು ಹಾಕಿದರು. ನಂತರ ದೂರದಿಂದ ಬಂದ ಕಾರಣಕ್ಕೆ 50 ಕೆ.ಜಿ ಮಾತ್ರ ಕೊಂಡರು. ಉಳಿದ ಹಣ್ಣನ್ನು ಕೆ.ಜಿ.ಗೆ ₹20ರಂತೆ ಮುಳಬಾಗಿಲು ನಗರದಲ್ಲಿ ಮಾರಾಟ ಮಾಡಿದರು.