ಎರಡು ನಿಗಮಗಳ ಆಧ್ಯಕ್ಷ ಸ್ಥಾನ ಕುರಿತಂತೆ ಕುಮಾರಸ್ವಾಮಿ ನನ್ನ ಸಲಹೆ ಕೇಳಿದ್ದಾರೆ. ಒಂದು ಸಚಿವ ಸ್ಥಾನ ಬಿಟ್ಟುಕೊಟ್ಟಿದ್ದೇವೆ, ನಿಗಮದ ಅಧ್ಯಸ್ಥ ಸ್ಥಾನವನ್ನೂ ಬಿಟ್ಟುಕೊಡಲು ಸೂಚಿಸಿದೆ ಎಂದರು. ಮುಸ್ಲಿಂ ಸಮುದಾಯದವರಿಗೆ ಸಚಿವ ಸ್ಥಾನ ನೀಡಿಲ್ಲ ಎಂಬ ಆರೋಪದ ಬಗ್ಗೆ ಪ್ರಸ್ತಾಪಿಸಿ, ನಗರ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಶೇ 40ರಷ್ಟು ಮುಸ್ಲಿಮರು ಪಕ್ಷದಿಂದ ಆರಿಸಿ ಬಂದಿರುವುದು ಆ ಸಮುದಾಯದವರಿಗೆ ಗೊತ್ತಿದೆ ಎಂದರು.