ಬೆಂಗಳೂರು: ಪೌರತ್ವ ಕಾಯ್ದೆ ಸಂಬಂಧ ನಗರ ಪೊಲೀಸ್ ಕಮಿಷನರ್ ಭಾಸ್ಕರ್ ರಾವ್ ಶುಕ್ರವಾರ ಟ್ವೀಟ್ ಮಾಡಿದ್ದು, ‘ಕಾಯ್ದೆಯು ಅಕ್ರಮ ವಲಸೆಗಾರರಿಗೆ ಸಂಬಂಧಿಸಿದ್ದು’ ಎಂದಿದ್ದಾರೆ.
‘ಭಾರತೀಯರೆಲ್ಲರೂ ಸಮಾನರು. ಭಾರತೀಯ ಮುಸ್ಲಿಂರಿಗೆ ಯಾವುದೇ ತೊಂದರೆ ಇಲ್ಲ. ತಮ್ಮ ಸ್ಥಾನಮಾನ ಬಗ್ಗೆ ಅತಂಕಪಡುವ ಅಗತ್ಯವಿಲ್ಲ. ಯಾವುದೇ ಸುಳ್ಳು ವದಂತಿ ಹಾಗೂ ಸುಳ್ಳು ಸುದ್ದಿಗಳಿಗೆ ಕಿವಿಗೊಡಬೇಡಿ’ ಎಂದು ಅವರು ಕೋರಿದ್ದಾರೆ.