‘ಈ ಸರ್ಕಾರ ಸ್ಥಿರವಾಗಿರಬೇಕು. ಸರ್ಕಾರ ಉರುಳಿಸುವ ಬಿಜೆಪಿ ಪ್ರಯತ್ನಕ್ಕೆ ಯಶಸ್ಸು ಸಿಗಬಾರದು. ಸರ್ಕಾರ ಹೇಗೆ, ಯಾರ ಆಶೀರ್ವಾದದಿಂದ ರಚನೆಯಾಯ್ತು ಅನ್ನೋದು ಈಗ ಮುಖ್ಯ ಅಲ್ಲವೇ ಅಲ್ಲ. ಮುಖ್ಯಮಂತ್ರಿ ಈಗ ಗ್ರಾಮ ವಾಸ್ತವ್ಯಕ್ಕೆ ಹೋಗಿದ್ದಾರೆ. ಪ್ರಗತಿ ಪರಿಶೀಲನಾ ಸಭೆ ನಡೆಯುತ್ತಿದೆ. ರಾಜ್ಯದ ಅಭಿವೃದ್ಧಿಗಾಗಿ ಈ ಸರ್ಕಾರ ಇರಬೇಕು’ ಎಂದು ದಿನೇಶ್ ಗುಂಡೂರಾವ್ ಹೇಳಿದ್ದಾರೆ.