ದಾವಣಗೆರೆ: ಮೈಸೂರು ವಿಶ್ವವಿದ್ಯಾಲಯದಲ್ಲಿ ಈಚೆಗೆ ನಡೆದ ಪ್ರತಿಭಟನೆ ವೇಳೆ ‘ಫ್ರೀ ಕಾಶ್ಮೀರ’ ಫಲಕ ಪ್ರದರ್ಶಿಸಿದ ನಳಿನಿ ಬಾಲಕುಮಾರ್ ಅವರ ಪರ ವಕಾಲತ್ತು ವಹಿಸುವುದಾಗಿ ದಾವಣಗೆರೆಯ ಪೀಪಲ್ಸ್ ಲಾಯರ್ಸ್ ಗಿಲ್ಡ್ ಅಧ್ಯಕ್ಷ ಅನೀಸ್ ಪಾಷಾ ತಿಳಿಸಿದ್ದಾರೆ.
‘ಮೈಸೂರು ವಕೀಲರ ಸಂಘವು ವಕಾಲತ್ತು ವಹಿಸದಂತೆ ನಿರ್ಣಯ ಕೈಗೊಂಡಿದ್ದು, ಒಂದು ವೇಳೆ ಪ್ರಕರಣವನ್ನು ನಮಗೆ ವಹಿಸಿದರೆ ಈ ಪ್ರಕರಣವನ್ನು ನಡೆಸಲು ಸಿದ್ಧರಿದ್ದೇವೆ’ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.