ಬೆಂಗಳೂರು: ‘ವಲಸೆ ಕಾರ್ಮಿಕರನ್ನು ಅದಕ್ಷರು, ಅಸಮರ್ಥರು ಎಂದೇ ಪರಿಗಣಿಸಲಾಗುತ್ತಿತ್ತು ಅಥವಾ ಅಂತಹ ಮನಸ್ಥಿತಿಯನ್ನು ಎಲ್ಲರೂ ಹೊಂದಿದ್ದರು. ಆದರೆ, ಕೊರೊನಾ ಬಿಕ್ಕಟ್ಟಿನ ನಂತರ ಈ ಪರಿಸ್ಥಿತಿ ಸಂಪೂರ್ಣ ಬದಲಾಗಿದೆ. ಯಂತ್ರಗಳನ್ನು ಅವಲಂಬಿಸಿದ ಆರ್ಥಿಕತೆಗಿಂತ ಇಂತಹ ಕಾರ್ಮಿಕರನ್ನು ಹೊಂದಿರುವ ಆರ್ಥಿಕತೆಯೇ ಪರಿಹಾರದಂತೆ ಕಾಣುತ್ತಿದೆ’ ಎಂದು ರಂಗಕರ್ಮಿ, ಸಾಮಾಜಿಕ ಕಾರ್ಯಕರ್ತ ಪ್ರಸನ್ನ ಅಭಿಪ್ರಾಯಪಟ್ಟರು.