ಬೆಳಗಾವಿ: ‘ಜಿಲ್ಲೆಯ ಕಬ್ಬು ಬೆಳೆಗಾರರ ಸಂಕಷ್ಟ ಬಹಳ ಶೋಚನೀಯವಾಗಿದೆ. ಇದಕ್ಕೆ ರಾಜ್ಯ ಸರ್ಕಾರದ ನಿರ್ಲಕ್ಷ್ಯವೇ ಪ್ರಮುಖ ಕಾರಣ’ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.
‘ನಮೋ ಆ್ಯಪ್’ ಮೂಲಕ ಬಿಜೆಪಿ ಬೂತ್ ಮಟ್ಟದ ಕಾರ್ಯಕರ್ತರೊಂದಿಗೆ ಶುಕ್ರವಾರ ನಡೆದ ‘ಮೇರಾ ಬೂತ್ ಸಬ್ ಸೇ ಮಜಬೂತ್’ ನೇರಸಂವಾದ ಕಾರ್ಯಕ್ರಮದಲ್ಲಿ ಬಿಜೆಪಿ ಉತ್ತರ ಕ್ಷೇತ್ರದ ಮಂಡಲ ಅಧ್ಯಕ್ಷ ಶ್ರೀನಿವಾಸ ಬೀಸನಕೊಪ್ಪ ಪ್ರಶ್ನೆಗೆ ಅವರು ಉತ್ತರಿಸಿದರು.
‘ಕರ್ನಾಟಕದ ಜನರು ಭ್ರಷ್ಟಾಚಾರ ಮುಕ್ತ ಅಭಿವೃದ್ಧಿ ಆಗಬೇಕು ಎಂದು ಬಯಸುತ್ತಿದ್ದಾರೆ. ಆದರೆ ಅಧಿಕಾರದಲ್ಲಿ ಇರುವವರು ಅಭಿವೃದ್ಧಿ ಮುಕ್ತ ಭ್ರಷ್ಟಾಚಾರ ಮಾಡುತ್ತಿದ್ದಾರೆ’ ಎಂದು ಟೀಕಿಸಿದರು.
‘ರಾಜ್ಯದಲ್ಲಿ ದಲಿತರಿಗೆ ಅನ್ಯಾಯವಾಗುತ್ತಿದೆ. ಅಧಿಕಾರ ಹಿಡಿಯಬೇಕೆಂಬ ಉದ್ದೇಶದಿಂದ ಸರ್ಕಾರ ರಚನೆ ಮಾಡಲಾಗಿದೆ. ಜನ ಇದೆಲ್ಲವನ್ನೂ ಗಮನಿಸುತ್ತಿದ್ದಾರೆ. ಮುಂದಿನ ದಿನಗಳಲ್ಲಿ ತಕ್ಕ ಪಾಠ ಕಲಿಸಲಿದ್ದಾರೆ’ ಎಂದರು.
In Karnataka, those in power are only bothered about ministries and portfolios. Public welfare is not their concern.
— Narendra Modi (@narendramodi) December 28, 2018
In such an atmosphere, the @BJP4Karnataka Karyakartas must continue being among people and highlight their issues. pic.twitter.com/OjteAOi0Ao
‘ಕರ್ನಾಟಕದಲ್ಲಿ ಈಗ ನಿತ್ಯ ಒಂದೇ ಮಾತು ಕೇಳುತ್ತಿದೆ. ಅದು ಅಧಿಕಾರಕ್ಕಾಗಿ ತೃಪ್ತರು ಮತ್ತು ಅತೃಪ್ತರು ಎಂಬ ವಿಷಯ. ಅದನ್ನು ಬಿಟ್ಟು ಬೇರೆ ಚರ್ಚೆಗಳೇ ಇಲ್ಲ. ಅಧಿಕಾರಕ್ಕಾಗಿ ಮ್ಯೂಸಿಕಲ್ ಚೇರ್ ಆಟ ನಡೆದಿದೆ’ ಎಂದು ಜೆಡಿಎಸ್–ಕಾಂಗ್ರೆಸ್ ಸಮ್ಮಿಶ್ರ ಸರ್ಕಾರದ ಕುರಿತು ವ್ಯಂಗ್ಯವಾಡಿದರು.
‘ಈ ಪರಿಸ್ಥಿತಿಯಲ್ಲಿ ಬಿಜೆಪಿ ಕಾರ್ಯಕರ್ತರು ಜನರ ದನಿಯಾಗಿ ಕೆಲಸ ಮಾಡಬೇಕು’ ಎಂದು ತಿಳಿಸಿದರು.
A Karyakarta from Bidar asked me about the steps taken by the Government for the MSME sector.
— Narendra Modi (@narendramodi) December 28, 2018
This is what I said... pic.twitter.com/2OWTa26C6X
‘ವೀರರಾಣಿ ಕಿತ್ತೂರು ಚನ್ನಮ್ಮನ ನಾಡು ಬೆಳಗಾವಿ. ಕೇಂದ್ರ ಸರ್ಕಾರದ ಸ್ಮಾರ್ಟ್ ಸಿಟಿ ಯೋಜನೆಗೆ ಆಯ್ಕೆಯಾದ ಹೆಮ್ಮೆಯ ನಗರ. ಇದರ ಅಭಿವೃದ್ಧಿಗೆ ಬಿಜೆಪಿ ಬದ್ಧವಾಗಿದೆ’ ಎಂದು ಭರವಸೆ ನೀಡಿದರು.
ಇದಕ್ಕೂ ಮುನ್ನ ಅವರೊಂದಿಗೆ ಮಾತನಾಡಿದ ಬಿಜೆಪಿ ನಗರ ಅಧ್ಯಕ್ಷ ರಾಜೇಂದ್ರ ಹರಕುಣಿ, ಸಂವಾದ ಕಾರ್ಯಕ್ರಮ ಏರ್ಪಡಿಸಿದ್ದಕ್ಕೆ ಹಾಗೂ ಸಾಂಬ್ರಾ ವಿಮಾನನಿಲ್ದಾನವನ್ನು ಉಡಾನ್ಗೆ ಸೇರಿಸಿದ್ದಕ್ಕೆ ಧನ್ಯವಾದ ಸಮರ್ಪಿಸಿದರು.
India is witnessing an increased arrival of tourists, which augurs well for our economy.
— Narendra Modi (@narendramodi) December 28, 2018
Talked about the steps taken in the tourism sector while interacting with a Karyakarta from Davanagere. pic.twitter.com/7yDUfGbACJ
ಕಾರ್ಯಕರ್ತರ ಜಗಳ:
ಕೆಎಲ್ಇ ಶತಮಾನೋತ್ಸವ ಸಭಾಂಗಣದಲ್ಲಿ ನಡೆದ ಸಂವಾದ ಮುಗಿಸಿ ಬರುವಾಗ ಕಾರ್ಯಕರ್ತರು ಜಗಳ ಮಾಡಿಕೊಂಡರು. ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ಆಯೋಜಿಸಿಲ್ಲ. ಸಂವಾದ ವೇಳೆ ಕೊರಳಿಗೆ ಬಿಜೆಪಿ ಶಲ್ಯ ತಂದಿರಲಿಲ್ಲ. ಮತಗಟ್ಟೆ ಕಾರ್ಯಕರ್ತರಿಗೆ ಸಂವಾದದ ಬಗ್ಗೆ ಮಾಹಿತಿ ನೀಡಿಲ್ಲ ಎಂದು ಆರೋಪಿಸಿದರು.
ನಗರ ಘಟಕದ ಪ್ರಧಾನ ಕಾರ್ಯದರ್ಶಿಗಳಾದ ದೀಪಕ ಜಮಖಂಡಿ ಹಾಗೂ ಶಶಿಕಾಂತ ಪಾಟೀಲ ಮಧ್ಯಪ್ರವೇಶಿಸಿ ಪರಿಸ್ಥಿತಿ ತಿಳಿಗೊಳಿಸಿದರು.
Spoke about how one can volunteer for the 2019 poll campaign and why we deeply value the efforts as well as insights of volunteers. pic.twitter.com/e8SyrNnMrk
— Narendra Modi (@narendramodi) December 28, 2018
Harnessing the demographic dividend and empowering our Yuva Shakti. pic.twitter.com/DwkGAxYawn
— Narendra Modi (@narendramodi) December 28, 2018
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.