‘ಶರಣರು ತಮ್ಮ ವಚನಗಳಲ್ಲಿ ಸಹಿಷ್ಣುತೆಯನ್ನು ಸಾರಿದ್ದಾರೆ. ನಮಗೆ ಇತರರ ವಿಚಾರ ಒಪ್ಪದೇ ಇರಬಹುದು. ಅದನ್ನು ಗೌರವಿಸಲೂ ಸಾಧ್ಯವಾಗದೇ ಇರಬಹುದು. ಆದರೆ, ವಿಚಾರ ಅಭಿವ್ಯಕ್ತಿಸಲು ಅವಕಾಶ ಕೊಡಬೇಕು. ಅದನ್ನು ಕಸಿಯುವ ಹಕ್ಕಿಲ್ಲ ಎಂದು ವಚನಗಳಲ್ಲಿ ಸಾರಿದ್ದಾರೆ. ಆದರೆ, ಈಗಿನ ಸಮಾಜ ಇದಕ್ಕೆ ತದ್ವಿರುದ್ಧವಾಗಿದೆ. ಇತರರ ವಿಚಾರಗಳನ್ನು ಒಪ್ಪುವ ಮನಸ್ಥಿತಿಯೂ ಇಲ್ಲ, ವಿಚಾರಗಳನ್ನು ಮಂಡಿಸಲೂ ಅವಕಾಶ ಕೊಡುತ್ತಿಲ್ಲ’ ಎಂದು ಬೇಸರದಿಂದ ಹೇಳಿದರು.