ಬೆಂಗಳೂರು/ವಿಜಯಪುರ: ದ್ವಿತೀಯ ಪಿಯು ಪರೀಕ್ಷೆ ಬುಧವಾರ ಆರಂಭವಾಗಿದ್ದು, ಭೌತವಿಜ್ಞಾನ ಪ್ರಶ್ನೆಪತ್ರಿಕೆ ಪರೀಕ್ಷೆ ಆರಂಭವಾದ 1 ಗಂಟೆಯ ಬಳಿಕ ವಾಟ್ಸ್ಆ್ಯಪ್ನಲ್ಲಿ ಹರಿದಾಡಿದೆ. ಇದುಪ್ರಶ್ನೆಪತ್ರಿಕೆ ಸೋರಿಕೆಯಲ್ಲ ಎಂದು ಇಲಾಖೆಯ ನಿರ್ದೆಶಕರು ಹೇಳಿದ್ದಾರೆ.
ಇಂಡಿಯ ಶಾಂತೇಶ್ವರ ಕಾಲೇಜಿನಿಂದ ವಾಟ್ಸ್ಆ್ಯಪ್ನಲ್ಲಿ ಪ್ರಶ್ನೆಪತ್ರಿಕೆ ವೈರಲ್ ಆಯಿತು. ಮುರುಗೇಂದ್ರ ಹಿರೇಮಠನ ಪ್ರಶ್ನೆಪತ್ರಿಕೆಯನ್ನು ನಾಗಪ್ಪ ಸದರ ಮೊಬೈಲ್ನಲ್ಲಿ ಕ್ಲಿಕ್ಕಿಸಿದ್ದ ಎಂದು ಹೇಳಲಾಗಿದೆ.
‘ಈ ಪ್ರಕರಣವನ್ನು ಕರ್ನಾಟಕ ಶಿಕ್ಷಣ ಕಾಯ್ದೆ ಪ್ರಕಾರ ಪ್ರಶ್ನೆಪತ್ರಿಕೆ ಸೋರಿಕೆ ಎಂದು ಪರಿಗಣಿಸಿಲ್ಲ.ಮರು ಪರೀಕ್ಷೆ ಅಗತ್ಯವಿಲ್ಲ. ವಿದ್ಯಾರ್ಥಿಗಳಿಬ್ಬರನ್ನೂ ವಶಕ್ಕೆ ಪಡೆಯಲಾಗಿದೆ. ಕೊಠಡಿಯ ಮೇಲ್ವಿಚಾರಕರಾದ ಎಂ.ಡಿ.ನಾರಾಯಣಕರ ಅವರನ್ನು ಅಮಾನತು ಮಾಡಲು ಇಲಾಖೆಗೆ ಶಿಫಾರಸು ಮಾಡಲಾಗಿದೆ’ ಎಂದು ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ ಹೇಳಿದರು.
ಡಿಬಾರ್: ವಿಜಯಪುರ ಜಿಲ್ಲೆಯಲ್ಲೇ 8 ಮಂದಿ ಡಿಬಾರ್ ಆಗಿದ್ದಾರೆ. ಇತರೆಡೆ ಇಂತಹ ಪ್ರಸಂಗ ನಡೆದಿಲ್ಲ.