<p>ಬೆಂಗಳೂರು: ವಲಸೆ ಕಾರ್ಮಿಕರು ತಮ್ಮ ಊರುಗಳಿಗೆ ತೆರಳಲು ರೈಲ್ವೆ ಇಲಾಖೆ ಕಲ್ಪಿಸಿದ್ದ ವಿಶೇಷ ಶ್ರಮಿಕ ರೈಲಿನಲ್ಲಿ ಈವರೆಗೆ 1.75 ಲಕ್ಷ ಜನ ರಾಜ್ಯದಿಂದ ಹೊರ ರಾಜ್ಯಗಳಿಗೆ ಪ್ರಯಾಣ ಮಾಡಿದ್ದಾರೆ.</p>.<p>ಮೇ 5ರಿಂದ ವಿಶೇಷ ಶ್ರಮಿಕ ರೈಲು ಸಂಚಾರವನ್ನು ನೈರುತ್ಯ ರೈಲ್ವೆ ಆರಂಭಿಸಿತು. ಬೆಂಗಳೂರಿನ ಚಿಕ್ಕಬಾಣಾವರ, ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ನಿಲ್ದಾಣ, ಕಂಟೋನ್ಮೆಂಟ್, ಮಾಲೂರು, ಹುಬ್ಬಳ್ಳಿ, ಕಬಕ ಪುತ್ತೂರು, ಮೈಸೂರಿನ ಅಶೋಕಪುರ, ಹಾಸನ, ಬಳ್ಳಾರಿ ರೈಲು ನಿಲ್ದಾಣಗಳಿಂದ 122 ರೈಲುಗಳು ಕಾರ್ಮಿಕರನ್ನು ಹೊತ್ತು ತೆರಳಿವೆ.</p>.<p>ಈ ರೈಲುಗಳಲ್ಲಿ ಕಾರ್ಮಿಕರು ಒಡಿಶಾ, ಬಿಹಾರ, ಜಾರ್ಖಂಡ್, ರಾಜಸ್ಥಾನ, ಉತ್ತರ ಪ್ರದೇಶ, ಜಮ್ಮು–ಕಾಶ್ಮೀರ, ಪಶ್ಚಿಮ ಬಂಗಾಳ, ಮಧ್ಯಪ್ರದೇಶ, ತ್ರಿಪುರ, ಹಿಮಾಚಲ ಪ್ರದೇಶ, ಉತ್ತರಖಂಡ, ಮಣಿಪುರ ರಾಜ್ಯಗಳಿಗೆ ವಾಪಸ್ ಹೋಗಿದ್ದಾರೆ.</p>.<p>ಮೊದಲ ದಿನ 4 ಶ್ರಮಿಕ ವಿಶೇಷ ರೈಲುಗಳು ಸಂಚರಿಸಿದ್ದವು. ಸದ್ಯ ದಿನಕ್ಕೆ 10ರಿಂದ 13 ರೈಲುಗಳು ವಿವಿಧ ನಿಲ್ದಾಣಗಳಿಂದ ಹೊರಡುತ್ತಿವೆ. ಬಹುತೇಕ ರೈಲುಗಳು ಬೆಂಗಳೂರಿನಿಂದಲೇ ತೆರಳಿದ್ದು, ವಲಸೆ ಕಾರ್ಮಿಕರು ಸಿಲಿಕಾನ್ ಸಿಟಿಯನ್ನು ತೊರೆದಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಬೆಂಗಳೂರು: ವಲಸೆ ಕಾರ್ಮಿಕರು ತಮ್ಮ ಊರುಗಳಿಗೆ ತೆರಳಲು ರೈಲ್ವೆ ಇಲಾಖೆ ಕಲ್ಪಿಸಿದ್ದ ವಿಶೇಷ ಶ್ರಮಿಕ ರೈಲಿನಲ್ಲಿ ಈವರೆಗೆ 1.75 ಲಕ್ಷ ಜನ ರಾಜ್ಯದಿಂದ ಹೊರ ರಾಜ್ಯಗಳಿಗೆ ಪ್ರಯಾಣ ಮಾಡಿದ್ದಾರೆ.</p>.<p>ಮೇ 5ರಿಂದ ವಿಶೇಷ ಶ್ರಮಿಕ ರೈಲು ಸಂಚಾರವನ್ನು ನೈರುತ್ಯ ರೈಲ್ವೆ ಆರಂಭಿಸಿತು. ಬೆಂಗಳೂರಿನ ಚಿಕ್ಕಬಾಣಾವರ, ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ನಿಲ್ದಾಣ, ಕಂಟೋನ್ಮೆಂಟ್, ಮಾಲೂರು, ಹುಬ್ಬಳ್ಳಿ, ಕಬಕ ಪುತ್ತೂರು, ಮೈಸೂರಿನ ಅಶೋಕಪುರ, ಹಾಸನ, ಬಳ್ಳಾರಿ ರೈಲು ನಿಲ್ದಾಣಗಳಿಂದ 122 ರೈಲುಗಳು ಕಾರ್ಮಿಕರನ್ನು ಹೊತ್ತು ತೆರಳಿವೆ.</p>.<p>ಈ ರೈಲುಗಳಲ್ಲಿ ಕಾರ್ಮಿಕರು ಒಡಿಶಾ, ಬಿಹಾರ, ಜಾರ್ಖಂಡ್, ರಾಜಸ್ಥಾನ, ಉತ್ತರ ಪ್ರದೇಶ, ಜಮ್ಮು–ಕಾಶ್ಮೀರ, ಪಶ್ಚಿಮ ಬಂಗಾಳ, ಮಧ್ಯಪ್ರದೇಶ, ತ್ರಿಪುರ, ಹಿಮಾಚಲ ಪ್ರದೇಶ, ಉತ್ತರಖಂಡ, ಮಣಿಪುರ ರಾಜ್ಯಗಳಿಗೆ ವಾಪಸ್ ಹೋಗಿದ್ದಾರೆ.</p>.<p>ಮೊದಲ ದಿನ 4 ಶ್ರಮಿಕ ವಿಶೇಷ ರೈಲುಗಳು ಸಂಚರಿಸಿದ್ದವು. ಸದ್ಯ ದಿನಕ್ಕೆ 10ರಿಂದ 13 ರೈಲುಗಳು ವಿವಿಧ ನಿಲ್ದಾಣಗಳಿಂದ ಹೊರಡುತ್ತಿವೆ. ಬಹುತೇಕ ರೈಲುಗಳು ಬೆಂಗಳೂರಿನಿಂದಲೇ ತೆರಳಿದ್ದು, ವಲಸೆ ಕಾರ್ಮಿಕರು ಸಿಲಿಕಾನ್ ಸಿಟಿಯನ್ನು ತೊರೆದಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>