‘ಬೈಯಪ್ಪನಹಳ್ಳಿ ಹಾಗೂ ಹೆಬ್ಬಾಳ ನಿಲ್ದಾಣಗಳ ನಡುವಿನ ಹಳಿ ಪಕ್ಕದಲ್ಲಿ ಮಂಗಳವಾರ ಕುರಿಗಳನ್ನು ಮೇಯಿಸುತ್ತಿದ್ದರು. ಸಂಜೆ 4ರ ಸುಮಾರಿಗೆ ಕೆಲ ಕುರಿಗಳು ಹಳಿ ಮೇಲೆ ಓಡಾಡುತ್ತಿದ್ದವು. ಅದೇ ವೇಳೆಯೇ ರೈಲು ಬರುತ್ತಿತ್ತು. ಅದನ್ನು ಗಮನಿಸಿದ ಚನ್ನಪ್ಪ, ಹಳಿಯತ್ತ ಓಡಿಹೋಗಿ ಕುರಿಗಳನ್ನು ಓಡಿಸಲು ಯತ್ನಿಸಿದ್ದರು. ವೇಗವಾಗಿ ಬಂದ ರೈಲು, ಅವರಿಗೆ ಗುದ್ದಿ ಮೈ ಮೇಲೆ ಹರಿದು ಹೋಗಿತ್ತು’ ಎಂದು ವಿವರಿಸಿದರು.