‘ನನ್ನನ್ನು ಹೀರೊ ಮಾಡಿದ್ರಿ, ವಿಲನ್ ಕೂಡ ಮಾಡಿದ್ರಿ, ಏಕಾಂಗಿ ಮಾಡಿದ್ರಿ’

ಬೆಂಗಳೂರು: ‘ನನ್ನನ್ನು ಹೀರೊ ಮಾಡಿದ್ರಿ, ವಿಲನ್ ಕೂಡ ಮಾಡಿದ್ರಿ, ಕೊನೆಗೆ ಏಕಾಂಗಿ ಮಾಡಿದ್ರಿ’ ಎಂದು ಮಾಜಿ ಸಚಿವ ರಮೇಶ ಜಾರಕಿಹೊಳಿ ಮಾಧ್ಯಮಗಳ ವಿರುದ್ಧ ಕಿಡಿಕಾರಿದ್ದಾರೆ.
‘ಪಕ್ಷದಲ್ಲಿ ಅಸಮಾಧಾನ ಇರುವುದು ನಿಜ. ಹೈಕಮಾಂಡ್ಗೆ ನಾವೇನೂ ಚಾಲೆಂಜ್ ಮಾಡಿಲ್ಲ’ ಎಂದು ಹೇಳಿದರು.
ನನ್ನ ಮಗಳ ಮದುವೆ ಇದೆ. ನನ್ನ ಸಂಬಂಧಿಗಳು ಹೆಚ್ಚಿನ ಸಂಖ್ಯೆಯಲ್ಲಿ ಮುಂಬೈನಲ್ಲಿದ್ದಾರೆ ಹಾಗಾಗಿ ನಾನು ಮತ್ತೆ ಮುಂಬೈಗೆ ಹೋಗುತ್ತೇನೆ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ... ನಾನು ಪಕ್ಷದಲ್ಲೇ ಇರುತ್ತೇನೆ, ರಾಜೀನಾಮೆ ಕೊಡಲ್ಲ: ಶಾಸಕ ಉಮೇಶ್ ಜಾಧವ್
‘ಬಿಜೆಪಿ ಶಾಸಕ ಅಶ್ವತ್ಥನಾರಾಯಣ ಅವರು ನನ್ನ ಮಿತ್ರರು. ಅವರ ಮನೆಗೆ ಹೋಗ್ತೇನೆ ಏನೀವಾಗ? ಯಾರೂ ಮನೆಗೂ ಹೋಗ್ಬಾರ್ದಾ? ಎಲ್ಲಾ ನೀವೇ ಹೇಳ್ತೀರಾ, ನೀವೇ ಮಾಡ್ತಿರಾ? ನೀವೇನೂ ಜಡ್ಜ್ಗಳಲ್ಲ’ ಎಂದು ಪ್ರಶ್ನಿಸಿದರು.
ರಾಜಕಾರಣಿಗಳು ನಾವೆಲ್ಲಾ ಮಿತ್ರರು. ನಮಗೆ ಬಿಜೆಪಿಯಲ್ಲೂ ಮಿತ್ರರಿದ್ದಾರೆ ಎಂದರು.
ಇದನ್ನೂ ಓದಿ... ‘ಹೀರೋನ ವಿಲನ್ ಮಾಡ್ತೀರಿ, ವಿಲನ್ನ ಹೀರೋ ಮಾಡ್ತೀರಿ’: ರಮೇಶ ಜಾರಕಿಹೊಳಿ ಕಿಡಿ
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.