<p><strong>ಬೆಂಗಳೂರು:</strong> ರಾಜ್ಯದ ಬಿಪಿಎಲ್ ಮತ್ತು ಅಂತ್ಯೋದಯ ಕಾರ್ಡ್ದಾರರಿಗೆ ಕೇಂದ್ರ ಸರ್ಕಾರ ಘೋಷಿಸಿದ ಅಕ್ಕಿಯೂ ಸೇರಿದಂತೆ ಎರಡು ತಿಂಗಳ ಪಡಿತರವನ್ನು ಬುಧವಾರದಿಂದ (ಏ. 1) ವಿತರಿಸಲು ಆಹಾರ ಇಲಾಖೆ ಸಿದ್ಧತೆ ಮಾಡಿಕೊಂಡಿದೆ.</p>.<p>ಬಿಪಿಎಲ್ ಕಾರ್ಡ್ಗಳಲ್ಲಿರುವ ಪ್ರತಿಯೊಬ್ಬ ಸದಸ್ಯನಿಗೆ (ಯುನಿಟ್ಗೆ) ತಲಾ 10 ಕೆ.ಜಿಯಂತೆ (ರಾಜ್ಯ ಮತ್ತು ಕೇಂದ್ರದ ತಲಾ 5 ಕೆ.ಜಿ) ಹಾಗೂ ಪ್ರತಿಯೊಂದು ಅಂತ್ಯೋದಯ ಕಾರ್ಡ್ಗಳಿಗೆ ಒಟ್ಟು 70 ಕೆ.ಜಿ (ರಾಜ್ಯ ಮತ್ತು ಕೇಂದ್ರದ ತಲಾ 35 ಕೆ.ಜಿ) ಅಕ್ಕಿ ಹಂಚಿಕೆ ಆಗಲಿದೆ.</p>.<p>ಕೊರೊನಾ ವೈರಾಣು ವ್ಯಾಪಕವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ಫಲಾನುಭವಿಗಳಿಗೆ ಎರಡು ತಿಂಗಳ ಪಡಿತರ ಏಕಕಾಲಕ್ಕೆ ವಿತರಿಸುವುದಾಗಿ ರಾಜ್ಯ ಸರ್ಕಾರ ಪ್ರಕಟಿಸಿತ್ತು. ಈ ಮಧ್ಯೆ, ಕೇಂದ್ರ ಕೂಡಾ ಅಕ್ಕಿ ನೀಡುವುದಾಗಿ ಪ್ರಕಟಿಸಿದ್ದರಿಂದ ಅದನ್ನೂ ಸೇರಿಸಿ ಎರಡು ತಿಂಗಳಿನ ಪಡಿತರ ಒಟ್ಟಿಗೆ ನೀಡಲಾಗುತ್ತದೆ ಎಂದು ಇಲಾಖೆ ಮೂಲಗಳು ತಿಳಿಸಿವೆ.</p>.<p>ರಾಜ್ಯ ಸರ್ಕಾರ ಎರಡು ತಿಂಗಳ ಒಟ್ಟು 4 ಕೆ.ಜಿ (ತಿಂಗಳಿಗೆ 2 ಕೆ.ಜಿ) ಗೋಧಿ ಕೂಡಾ ವಿತರಿಸಲಿಸಲಿದೆ. ಆದರೆ, ಗೋಧಿ ಲಭ್ಯ ಇಲ್ಲದೇ ಇರುವುದರಿಂದ ಹಲವು ಜಿಲ್ಲೆಗಳಲ್ಲಿ ವಿತರಣೆ ವಿಳಂಬವಾಗಲಿದೆ. ಅಲ್ಲದೆ, ಕೇಂದ್ರ ಮೂರು ತಿಂಗಳು ನೀಡುವುದಾಗಿ ಘೋಷಿಸಿರುವ ತಲಾ 1 ಕೆ.ಜಿ ತೊಗರಿ ಬೇಳೆ ವಿತರಣೆ ಕೂಡಾ 15 ದಿನ ವಿಳಂಬವಾಗಲಿದ್ದು, ಮೇ ತಿಂಗಳಿನಿಂದ ಹಂಚಿಕೆ ಸಾಧ್ಯವಾಗಲಿದೆ ಎಂದೂ ಹೇಳಿವೆ.</p>.<p><strong>ಎಪಿಎಲ್ ಕಾರ್ಡ್ಗಳಿಗೂ ಅಕ್ಕಿ:</strong> ಎಪಿಎಲ್ ಕಾರ್ಡ್ಗಳಿಗೆ (ತಿಂಗಳಿಗೆ) ಒಬ್ಬರು ಸದಸ್ಯರು ಮಾತ್ರ ಇದ್ದರೆ 5 ಕೆ.ಜಿ. ಒಬ್ಬರಿಗಿಂತ ಜಾಸ್ತಿ ಇದ್ದರೆ ಒಂದು ಕಾರ್ಡ್ಗೆ 10 ಕೆ.ಜಿ ನೀಡಲಾಗುವುದು. ಪ್ರತಿ ಕೆ. ಜಿಗೆ ₹ 15 ಕೊಟ್ಟು ಖರೀದಿಸಬೇಕು. ಅವರೂ ಎರಡು ತಿಂಗಳ ಪಡಿತರ ಒಟ್ಟಿಗೆ ಪಡೆದುಕೊಳ್ಳಬಹುದು. ನ್ಯಾಯಬೆಲೆ ಅಂಗಡಿಗಳಿಗೆ ಆಹಾರಧಾನ್ಯಗಳ ಸಾಗಣೆ ಮತ್ತು ಫಲಾನುಭವಿಗಳಿಗೆ ವಿತರಿಸಲು ಯಾವುದೇ ಸಮಸ್ಯೆ ಇಲ್ಲ. ಪಡಿತರ ವ್ಯವಸ್ಥೆಯ ಬಗ್ಗೆ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯ ಕಾರ್ಯಪಡೆ ನಿಗಾ ವಹಿಸಲಿದೆ.</p>.<p>ರಾಜ್ಯಕ್ಕೆ ಪೂರೈಸಲು ಸಾಕಾಗುವಷ್ಟು ಅಕ್ಕಿ ಭಾರತೀಯ ಆಹಾರ ನಿಗಮದ ಗೋದಾಮುಗಳಲ್ಲಿ ದಾಸ್ತಾನಿದೆ. ಗೋದಾಮುಗಳಿಲ್ಲದಚಿಕ್ಕಮಗಳೂರು ಜಿಲ್ಲೆಗೆ ಶಿವಮೊಗ್ಗ ಮತ್ತು ಹಾಸನದಿಂದ ಹಾಗೂ ಕೊಡಗು ಜಿಲ್ಲೆಗೆ ಮೈಸೂರಿನಿಂದ ಪೂರೈಕೆ ಮಾಡಲಾಗುತ್ತದೆ.</p>.<p><strong>ಬಯೋಮೆಟ್ರಿಕ್ಬದಲು ಒಟಿಪಿ</strong><br />ರಾಜ್ಯದಾದ್ಯಂತ ಬಯೋಮೆಟ್ರಿಕ್ ಬದಲು ಮೊಬೈಲ್ ಸಂಖ್ಯೆಗೆ ಬರುವ ಒಟಿಪಿ ಪಡೆದು ಆಹಾರಧಾನ್ಯ ವಿತರಿಸಲಾಗುತ್ತಿದೆ. ಆಧಾರ್ ಕಾರ್ಡ್ಗೆ ಲಿಂಕ್ ಆಗಿರುವ ಫಲಾನುಭವಿಯ ಮೊಬೈಲ್ ನಂಬರ್ಗೆ ಒಟಿಪಿ ಸಂಖ್ಯೆ ಬರುತ್ತದೆ. ಅದನ್ನು ನ್ಯಾಯಬೆಲೆ ಅಂಗಡಿಗಳಲ್ಲಿ ನೀಡಿ ಪಡಿತರ ಪಡೆದುಕೊಳ್ಳಬಹುದು ಎಂದೂ ಆಹಾರ ಇಲಾಖೆ ತಿಳಿಸಿದೆ.</p>.<p><strong>ಇದನ್ನೂ ಓದಿ...<a href="https://www.prajavani.net/explainer/explainer-ration-card-scam-708526.html" target="_blank">Explainer | ಎಲ್ಲಿಗೆ ಹೋಗುತ್ತಿವೆ ಈ ರೇಷನ್ ಕಾರ್ಡ್ಗಳು?</a></strong></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು:</strong> ರಾಜ್ಯದ ಬಿಪಿಎಲ್ ಮತ್ತು ಅಂತ್ಯೋದಯ ಕಾರ್ಡ್ದಾರರಿಗೆ ಕೇಂದ್ರ ಸರ್ಕಾರ ಘೋಷಿಸಿದ ಅಕ್ಕಿಯೂ ಸೇರಿದಂತೆ ಎರಡು ತಿಂಗಳ ಪಡಿತರವನ್ನು ಬುಧವಾರದಿಂದ (ಏ. 1) ವಿತರಿಸಲು ಆಹಾರ ಇಲಾಖೆ ಸಿದ್ಧತೆ ಮಾಡಿಕೊಂಡಿದೆ.</p>.<p>ಬಿಪಿಎಲ್ ಕಾರ್ಡ್ಗಳಲ್ಲಿರುವ ಪ್ರತಿಯೊಬ್ಬ ಸದಸ್ಯನಿಗೆ (ಯುನಿಟ್ಗೆ) ತಲಾ 10 ಕೆ.ಜಿಯಂತೆ (ರಾಜ್ಯ ಮತ್ತು ಕೇಂದ್ರದ ತಲಾ 5 ಕೆ.ಜಿ) ಹಾಗೂ ಪ್ರತಿಯೊಂದು ಅಂತ್ಯೋದಯ ಕಾರ್ಡ್ಗಳಿಗೆ ಒಟ್ಟು 70 ಕೆ.ಜಿ (ರಾಜ್ಯ ಮತ್ತು ಕೇಂದ್ರದ ತಲಾ 35 ಕೆ.ಜಿ) ಅಕ್ಕಿ ಹಂಚಿಕೆ ಆಗಲಿದೆ.</p>.<p>ಕೊರೊನಾ ವೈರಾಣು ವ್ಯಾಪಕವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ಫಲಾನುಭವಿಗಳಿಗೆ ಎರಡು ತಿಂಗಳ ಪಡಿತರ ಏಕಕಾಲಕ್ಕೆ ವಿತರಿಸುವುದಾಗಿ ರಾಜ್ಯ ಸರ್ಕಾರ ಪ್ರಕಟಿಸಿತ್ತು. ಈ ಮಧ್ಯೆ, ಕೇಂದ್ರ ಕೂಡಾ ಅಕ್ಕಿ ನೀಡುವುದಾಗಿ ಪ್ರಕಟಿಸಿದ್ದರಿಂದ ಅದನ್ನೂ ಸೇರಿಸಿ ಎರಡು ತಿಂಗಳಿನ ಪಡಿತರ ಒಟ್ಟಿಗೆ ನೀಡಲಾಗುತ್ತದೆ ಎಂದು ಇಲಾಖೆ ಮೂಲಗಳು ತಿಳಿಸಿವೆ.</p>.<p>ರಾಜ್ಯ ಸರ್ಕಾರ ಎರಡು ತಿಂಗಳ ಒಟ್ಟು 4 ಕೆ.ಜಿ (ತಿಂಗಳಿಗೆ 2 ಕೆ.ಜಿ) ಗೋಧಿ ಕೂಡಾ ವಿತರಿಸಲಿಸಲಿದೆ. ಆದರೆ, ಗೋಧಿ ಲಭ್ಯ ಇಲ್ಲದೇ ಇರುವುದರಿಂದ ಹಲವು ಜಿಲ್ಲೆಗಳಲ್ಲಿ ವಿತರಣೆ ವಿಳಂಬವಾಗಲಿದೆ. ಅಲ್ಲದೆ, ಕೇಂದ್ರ ಮೂರು ತಿಂಗಳು ನೀಡುವುದಾಗಿ ಘೋಷಿಸಿರುವ ತಲಾ 1 ಕೆ.ಜಿ ತೊಗರಿ ಬೇಳೆ ವಿತರಣೆ ಕೂಡಾ 15 ದಿನ ವಿಳಂಬವಾಗಲಿದ್ದು, ಮೇ ತಿಂಗಳಿನಿಂದ ಹಂಚಿಕೆ ಸಾಧ್ಯವಾಗಲಿದೆ ಎಂದೂ ಹೇಳಿವೆ.</p>.<p><strong>ಎಪಿಎಲ್ ಕಾರ್ಡ್ಗಳಿಗೂ ಅಕ್ಕಿ:</strong> ಎಪಿಎಲ್ ಕಾರ್ಡ್ಗಳಿಗೆ (ತಿಂಗಳಿಗೆ) ಒಬ್ಬರು ಸದಸ್ಯರು ಮಾತ್ರ ಇದ್ದರೆ 5 ಕೆ.ಜಿ. ಒಬ್ಬರಿಗಿಂತ ಜಾಸ್ತಿ ಇದ್ದರೆ ಒಂದು ಕಾರ್ಡ್ಗೆ 10 ಕೆ.ಜಿ ನೀಡಲಾಗುವುದು. ಪ್ರತಿ ಕೆ. ಜಿಗೆ ₹ 15 ಕೊಟ್ಟು ಖರೀದಿಸಬೇಕು. ಅವರೂ ಎರಡು ತಿಂಗಳ ಪಡಿತರ ಒಟ್ಟಿಗೆ ಪಡೆದುಕೊಳ್ಳಬಹುದು. ನ್ಯಾಯಬೆಲೆ ಅಂಗಡಿಗಳಿಗೆ ಆಹಾರಧಾನ್ಯಗಳ ಸಾಗಣೆ ಮತ್ತು ಫಲಾನುಭವಿಗಳಿಗೆ ವಿತರಿಸಲು ಯಾವುದೇ ಸಮಸ್ಯೆ ಇಲ್ಲ. ಪಡಿತರ ವ್ಯವಸ್ಥೆಯ ಬಗ್ಗೆ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯ ಕಾರ್ಯಪಡೆ ನಿಗಾ ವಹಿಸಲಿದೆ.</p>.<p>ರಾಜ್ಯಕ್ಕೆ ಪೂರೈಸಲು ಸಾಕಾಗುವಷ್ಟು ಅಕ್ಕಿ ಭಾರತೀಯ ಆಹಾರ ನಿಗಮದ ಗೋದಾಮುಗಳಲ್ಲಿ ದಾಸ್ತಾನಿದೆ. ಗೋದಾಮುಗಳಿಲ್ಲದಚಿಕ್ಕಮಗಳೂರು ಜಿಲ್ಲೆಗೆ ಶಿವಮೊಗ್ಗ ಮತ್ತು ಹಾಸನದಿಂದ ಹಾಗೂ ಕೊಡಗು ಜಿಲ್ಲೆಗೆ ಮೈಸೂರಿನಿಂದ ಪೂರೈಕೆ ಮಾಡಲಾಗುತ್ತದೆ.</p>.<p><strong>ಬಯೋಮೆಟ್ರಿಕ್ಬದಲು ಒಟಿಪಿ</strong><br />ರಾಜ್ಯದಾದ್ಯಂತ ಬಯೋಮೆಟ್ರಿಕ್ ಬದಲು ಮೊಬೈಲ್ ಸಂಖ್ಯೆಗೆ ಬರುವ ಒಟಿಪಿ ಪಡೆದು ಆಹಾರಧಾನ್ಯ ವಿತರಿಸಲಾಗುತ್ತಿದೆ. ಆಧಾರ್ ಕಾರ್ಡ್ಗೆ ಲಿಂಕ್ ಆಗಿರುವ ಫಲಾನುಭವಿಯ ಮೊಬೈಲ್ ನಂಬರ್ಗೆ ಒಟಿಪಿ ಸಂಖ್ಯೆ ಬರುತ್ತದೆ. ಅದನ್ನು ನ್ಯಾಯಬೆಲೆ ಅಂಗಡಿಗಳಲ್ಲಿ ನೀಡಿ ಪಡಿತರ ಪಡೆದುಕೊಳ್ಳಬಹುದು ಎಂದೂ ಆಹಾರ ಇಲಾಖೆ ತಿಳಿಸಿದೆ.</p>.<p><strong>ಇದನ್ನೂ ಓದಿ...<a href="https://www.prajavani.net/explainer/explainer-ration-card-scam-708526.html" target="_blank">Explainer | ಎಲ್ಲಿಗೆ ಹೋಗುತ್ತಿವೆ ಈ ರೇಷನ್ ಕಾರ್ಡ್ಗಳು?</a></strong></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>