ಆಡಿಯೊ ಪ್ರಕರಣ ದೇವದುರ್ಗದಲ್ಲಿ ನಡೆದಿದೆ ಎನ್ನಲಾಗಿದೆ. ಆದರೆ ಆ ಸನ್ನಿವೇಶ ರಾಜ್ಯದ ರಾಜಕೀಯಅಸ್ಥಿರತೆಗೆ ನಡೆದ ಪ್ರಯತ್ನವಾಗಿದೆ. ಸಭಾಧ್ಯಕ್ಷರನ್ನು ನಡುವೆ ಎಳೆದಿರುವುದರಿಂದ ಪ್ರಕರಣವನ್ನು ಗಂಭೀರವಾಗಿ ಸ್ವೀಕರಿಸಬೇಕು. ಪ್ರಕರಣದಲ್ಲಿ ಪ್ರಧಾನಿಗಳ ಹೆಸರು ಪ್ರಸ್ತಾಪವಾಗಿದೆ. ನ್ಯಾಯಮೂರ್ತಿಗಳನ್ನು ಎಳೆದು ತರಲಾಗಿದೆ. ಇಂಥ ಗಂಭೀರ ಪ್ರಕರಣವನ್ನು ಇಲ್ಲಿಗೇ ಬಿಟ್ಟುಬಿಡಿ ಎಂದರೆ ಹೇಗೆ ಎಂದು ಪ್ರಶ್ನಿಸಿದರು.