ಯಾವುದೇ ಇಲಾಖೆಯಲ್ಲಿ 100 ಹುದ್ದೆಗಳಿಗೆ ಬಡ್ತಿ ನೀಡುವಾಗ ಶೇ 18 ರಷ್ಟು ಹುದ್ದೆಗಳನ್ನು ಪರಿಶಿಷ್ಟ ಜಾತಿ ಮತ್ತು ವರ್ಗಕ್ಕೆ ನೀಡಲಿ. ಅದನ್ನು ಬಿಟ್ಟು ಸರ್ಕಾರ ಎಲ್ಲ ಹುದ್ದೆಗಳಿಗೂ(ಶೇ 82) ಬಡ್ತಿಯಲ್ಲಿ ಮೀಸಲಾತಿ ನೀಡಲು ಹೊರಟಿರುವುದು ತಪ್ಪು. ಶೇ 18 ವರ್ಗದ ಜನರ ಕಣ್ಣಿಗೆ ಬೆಣ್ಣೆ ಮತ್ತು ಶೇ 82 ರ ವರ್ಗದವರ ಕಣ್ಣಿಗೆ ಸುಣ್ಣ ಎಂಬ ಸರ್ಕಾರದ ನೀತಿಯನ್ನು ಒಪ್ಪಲು ಸಾಧ್ಯವಿಲ್ಲ. ಅಲ್ಪಸಂಖ್ಯಾತ, ಹಿಂದುಳಿದ ಮತ್ತು ಸಾಮಾನ್ಯ ವರ್ಗಕ್ಕೆ ಬಡ್ತಿಯಲ್ಲಿ ನ್ಯಾಯ ಕೊಡಬೇಡಿ ಎಂದು ಸಂವಿಧಾನವೂ ಹೇಳಿಲ್ಲ. ಆದ್ದರಿಂದ, ಮಹಾತ್ಮ ಗಾಂಧಿ ಹೇಳಿಕೊಟ್ಟಿರುವ ಅಹಿಂಸಾತ್ಮಕ ಹೋರಾಟ ನಡೆಸಲಾಗುತ್ತದೆ ಎಂದರು.