<p><strong>ಮಡಿಕೇರಿ: </strong>‘ಪುಸ್ತಕ ಬೇಕಾದರೆ ಶಾಲಾ ಶುಲ್ಕ ಕಟ್ಟಬೇಕು; ಇಲ್ಲದಿದ್ದಲ್ಲಿ ನಿಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗೆ ಸೇರಿಸಿ...’ಇದು ಮಡಿಕೇರಿಯ ಪ್ರತಿಷ್ಠಿತ ಖಾಸಗಿ ವಿದ್ಯಾಸಂಸ್ಥೆಯೊಂದು ಪೋಷಕರಿಗೆ ನೀಡಿದ ಸೂಚನೆ.</p>.<p>ನಗರದ ಕೊಡಗು ವಿದ್ಯಾಲಯ ಸಂಸ್ಥೆಯು ವಿದ್ಯಾರ್ಥಿಗಳಿಗೆ ಪುಸ್ತಕ ವಿತರಿಸುವ ಸಲುವಾಗಿ ಶಾಲೆಗೆ ಬರಲು ಹೇಳಿತ್ತು. ಈ ಹಿನ್ನೆಲೆ ಪೋಷಕರು ಶಾಲೆಗೆ ತೆರಳಿದಾಗ ಮೊದಲು ಶಾಲಾ ಶುಲ್ಕವನ್ನು ಕಟ್ಟುವಂತೆ ಅಲ್ಲಿನ ಆಡಳಿತ ಮಂಡಳಿ ಸೂಚಿಸಿದೆ ಎಂಬ ಆರೋಪ ಗುರುವಾರ ಕೇಳಿಬಂದಿದೆ.</p>.<p>‘ಇದು ಲಾಕ್ಡೌನ್ ಸಮಯ. ಶಾಲೆ ಆರಂಭವಾಗಲು ಇನ್ನೂ ಸಮಯವಿದೆ. ಸರ್ಕಾರವು ಇನ್ನೂ ಯಾವುದೇ ಆದೇಶ ಬಂದಿಲ್ಲ’ ಎಂದು ಪೋಷಕರು ಹೇಳಿದರು.</p>.<p>ಇದಕ್ಕೆ ಪ್ರತಿಕ್ರಿಯಿಸಿರುವ ಶಾಲಾ ಆಡಳಿತ ಮಂಡಳಿಯವರು, ‘ಪುಸ್ತಕ ಬೇಕಿದ್ದಲ್ಲಿ ವಿದ್ಯಾರ್ಥಿಗಳ ಶುಲ್ಕ ಪಾವತಿಸುವುದು ಕಡ್ಡಾಯ. ಶುಲ್ಕ ಕಟ್ಟಲು ಸಾಧ್ಯವಾಗದಿದ್ದಲ್ಲಿ ನಿಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗೆ ಸೇರಿಸಿ’ ಎಂದು ಹೇಳಿದ್ದು ಪೋಷಕರ ಅಸಮಾಧಾನಕ್ಕೆ ಕಾರಣವಾಯಿತು.</p>.<p>ಪೋಷಕರು ಅಸಮಾಧಾನ ವ್ಯಕ್ತಪಡಿಸಿದ ಮೇಲೆ ಸ್ಥಳಕ್ಕೆ ಮಡಿಕೇರಿ ರಕ್ಷಣಾ ವೇದಿಕೆ ಪದಾಧಿಕಾರಿಗಳೂ ಆಗಮಿಸಿದರು. ಶಾಲಾ ಆಡಳಿತ ಮಂಡಳಿಯ ಪ್ರಮುಖರನ್ನು ತರಾಟೆಗೆ ತೆಗೆದುಕೊಂಡರು. ಪೋಷಕರು, ವೇದಿಕೆ ಕಾರ್ಯಕರ್ತರು ಹಾಗೂ ಶಾಲಾ ಆಡಳಿತ ಮಂಡಳಿಯವರ ನಡುವೆ ಮಾತಿನ ಚಕಮಕಿ ನಡೆಯಿತು.</p>.<p><strong>ಡಿ.ಸಿಗೆ ವರದಿ: </strong>ಸ್ಥಳಕ್ಕೆ ಶಿಕ್ಷಣ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಪರಿಸ್ಥಿತಿ ತಿಳಿಗೊಳಿಸಿದರು. ಈ ಸಂಬಂಧ ಪತಿಶೀಲನೆ ನಡೆಸಿ ಜಿಲ್ಲಾಧಿಕಾರಿಗೆ ವರದಿ ಸಲ್ಲಿಸಲಾಗುವುದು ಎಂದು ಅಧಿಕಾರಿಗಳು ಭರವಸೆ ನೀಡಿದರು.</p>.<p>**</p>.<p>ಶುಲ್ಕ ಪಡೆಯದಿದ್ದಲ್ಲಿ ಶಾಲೆ ನಡೆಸಲು ಅಸಾಧ್ಯ. ಶಿಕ್ಷಕರಿಗೆ ಇದೇ ಹಣದಲ್ಲಿ ವೇತನ ಪಾವತಿಸಬೇಕು. ರಜೆ ಇದ್ದರೂ ನಾವು ಶಾಲೆ ನಿರ್ವಹಣೆ ಮಾಡಬೇಕು.<br /><em><strong>-ವಿದ್ಯಾ, ಪ್ರಾಂಶುಪಾಲರು, ಕೊಡಗು ವಿದ್ಯಾಲಯ</strong></em></p>.<p><em><strong>**</strong></em></p>.<p>ಪುಸ್ತಕ ಪಡೆಯಲು ಶಾಲೆಗೆ ತೆರಳಿದ ಸಂದರ್ಭ ಶುಲ್ಕ ಕೇಳುತ್ತಿದ್ದಾರೆ. ಶುಲ್ಕ ಪಾವತಿಸಲು ಸಾಧ್ಯವಾಗದಿದ್ದಲ್ಲಿ ವಿದ್ಯಾರ್ಥಿಗಳನ್ನು ಇಲ್ಲಿಂದ ಕರೆದೊಯ್ಯಿರಿ ಎಂದು ಹೇಳಿದ್ದಾರೆ. ಇವರ ವಿರುದ್ಧ ಕ್ರಮವಾಗಬೇಕು.<br /><em><strong>-ಸಮೀನಾ, ಪೋಷಕರು</strong></em></p>.<p><em><strong>**</strong></em></p>.<p>ಶಾಲೆ ತೆರೆಯಲು ಇನ್ನೂ ಸರ್ಕಾರದಿಂದ ಆದೇಶವೇ ಬಂದಿಲ್ಲ. ಇಂತಹ ಸಂದರ್ಭದಲ್ಲಿ ಪುಸ್ತಕ ಪಡೆಯಲು ಪೋಷಕರನ್ನು ಕರೆಯಿಸಿ ಶುಲ್ಕ ಕೇಳುತ್ತಿರುವುದು ಸರಿಯಲ್ಲ.<br /><em><strong>-ಪವನ್ ಪೆಮ್ಮಯ್ಯ, ಅಧ್ಯಕ್ಷ, ನಗರ ರಕ್ಷಣಾ ವೇದಿಕೆ</strong></em></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮಡಿಕೇರಿ: </strong>‘ಪುಸ್ತಕ ಬೇಕಾದರೆ ಶಾಲಾ ಶುಲ್ಕ ಕಟ್ಟಬೇಕು; ಇಲ್ಲದಿದ್ದಲ್ಲಿ ನಿಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗೆ ಸೇರಿಸಿ...’ಇದು ಮಡಿಕೇರಿಯ ಪ್ರತಿಷ್ಠಿತ ಖಾಸಗಿ ವಿದ್ಯಾಸಂಸ್ಥೆಯೊಂದು ಪೋಷಕರಿಗೆ ನೀಡಿದ ಸೂಚನೆ.</p>.<p>ನಗರದ ಕೊಡಗು ವಿದ್ಯಾಲಯ ಸಂಸ್ಥೆಯು ವಿದ್ಯಾರ್ಥಿಗಳಿಗೆ ಪುಸ್ತಕ ವಿತರಿಸುವ ಸಲುವಾಗಿ ಶಾಲೆಗೆ ಬರಲು ಹೇಳಿತ್ತು. ಈ ಹಿನ್ನೆಲೆ ಪೋಷಕರು ಶಾಲೆಗೆ ತೆರಳಿದಾಗ ಮೊದಲು ಶಾಲಾ ಶುಲ್ಕವನ್ನು ಕಟ್ಟುವಂತೆ ಅಲ್ಲಿನ ಆಡಳಿತ ಮಂಡಳಿ ಸೂಚಿಸಿದೆ ಎಂಬ ಆರೋಪ ಗುರುವಾರ ಕೇಳಿಬಂದಿದೆ.</p>.<p>‘ಇದು ಲಾಕ್ಡೌನ್ ಸಮಯ. ಶಾಲೆ ಆರಂಭವಾಗಲು ಇನ್ನೂ ಸಮಯವಿದೆ. ಸರ್ಕಾರವು ಇನ್ನೂ ಯಾವುದೇ ಆದೇಶ ಬಂದಿಲ್ಲ’ ಎಂದು ಪೋಷಕರು ಹೇಳಿದರು.</p>.<p>ಇದಕ್ಕೆ ಪ್ರತಿಕ್ರಿಯಿಸಿರುವ ಶಾಲಾ ಆಡಳಿತ ಮಂಡಳಿಯವರು, ‘ಪುಸ್ತಕ ಬೇಕಿದ್ದಲ್ಲಿ ವಿದ್ಯಾರ್ಥಿಗಳ ಶುಲ್ಕ ಪಾವತಿಸುವುದು ಕಡ್ಡಾಯ. ಶುಲ್ಕ ಕಟ್ಟಲು ಸಾಧ್ಯವಾಗದಿದ್ದಲ್ಲಿ ನಿಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗೆ ಸೇರಿಸಿ’ ಎಂದು ಹೇಳಿದ್ದು ಪೋಷಕರ ಅಸಮಾಧಾನಕ್ಕೆ ಕಾರಣವಾಯಿತು.</p>.<p>ಪೋಷಕರು ಅಸಮಾಧಾನ ವ್ಯಕ್ತಪಡಿಸಿದ ಮೇಲೆ ಸ್ಥಳಕ್ಕೆ ಮಡಿಕೇರಿ ರಕ್ಷಣಾ ವೇದಿಕೆ ಪದಾಧಿಕಾರಿಗಳೂ ಆಗಮಿಸಿದರು. ಶಾಲಾ ಆಡಳಿತ ಮಂಡಳಿಯ ಪ್ರಮುಖರನ್ನು ತರಾಟೆಗೆ ತೆಗೆದುಕೊಂಡರು. ಪೋಷಕರು, ವೇದಿಕೆ ಕಾರ್ಯಕರ್ತರು ಹಾಗೂ ಶಾಲಾ ಆಡಳಿತ ಮಂಡಳಿಯವರ ನಡುವೆ ಮಾತಿನ ಚಕಮಕಿ ನಡೆಯಿತು.</p>.<p><strong>ಡಿ.ಸಿಗೆ ವರದಿ: </strong>ಸ್ಥಳಕ್ಕೆ ಶಿಕ್ಷಣ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಪರಿಸ್ಥಿತಿ ತಿಳಿಗೊಳಿಸಿದರು. ಈ ಸಂಬಂಧ ಪತಿಶೀಲನೆ ನಡೆಸಿ ಜಿಲ್ಲಾಧಿಕಾರಿಗೆ ವರದಿ ಸಲ್ಲಿಸಲಾಗುವುದು ಎಂದು ಅಧಿಕಾರಿಗಳು ಭರವಸೆ ನೀಡಿದರು.</p>.<p>**</p>.<p>ಶುಲ್ಕ ಪಡೆಯದಿದ್ದಲ್ಲಿ ಶಾಲೆ ನಡೆಸಲು ಅಸಾಧ್ಯ. ಶಿಕ್ಷಕರಿಗೆ ಇದೇ ಹಣದಲ್ಲಿ ವೇತನ ಪಾವತಿಸಬೇಕು. ರಜೆ ಇದ್ದರೂ ನಾವು ಶಾಲೆ ನಿರ್ವಹಣೆ ಮಾಡಬೇಕು.<br /><em><strong>-ವಿದ್ಯಾ, ಪ್ರಾಂಶುಪಾಲರು, ಕೊಡಗು ವಿದ್ಯಾಲಯ</strong></em></p>.<p><em><strong>**</strong></em></p>.<p>ಪುಸ್ತಕ ಪಡೆಯಲು ಶಾಲೆಗೆ ತೆರಳಿದ ಸಂದರ್ಭ ಶುಲ್ಕ ಕೇಳುತ್ತಿದ್ದಾರೆ. ಶುಲ್ಕ ಪಾವತಿಸಲು ಸಾಧ್ಯವಾಗದಿದ್ದಲ್ಲಿ ವಿದ್ಯಾರ್ಥಿಗಳನ್ನು ಇಲ್ಲಿಂದ ಕರೆದೊಯ್ಯಿರಿ ಎಂದು ಹೇಳಿದ್ದಾರೆ. ಇವರ ವಿರುದ್ಧ ಕ್ರಮವಾಗಬೇಕು.<br /><em><strong>-ಸಮೀನಾ, ಪೋಷಕರು</strong></em></p>.<p><em><strong>**</strong></em></p>.<p>ಶಾಲೆ ತೆರೆಯಲು ಇನ್ನೂ ಸರ್ಕಾರದಿಂದ ಆದೇಶವೇ ಬಂದಿಲ್ಲ. ಇಂತಹ ಸಂದರ್ಭದಲ್ಲಿ ಪುಸ್ತಕ ಪಡೆಯಲು ಪೋಷಕರನ್ನು ಕರೆಯಿಸಿ ಶುಲ್ಕ ಕೇಳುತ್ತಿರುವುದು ಸರಿಯಲ್ಲ.<br /><em><strong>-ಪವನ್ ಪೆಮ್ಮಯ್ಯ, ಅಧ್ಯಕ್ಷ, ನಗರ ರಕ್ಷಣಾ ವೇದಿಕೆ</strong></em></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>