‘ಬಿಜೆಪಿ, ಆರ್ಎಸ್ಎಸ್ ಮುಖಂಡರು ಕೋಮು ಭಾವನೆ ಕೆರಳಿಸುವಂತಹ ಹೇಳಿಕೆಗಳನ್ನು ಬಹಿರಂಗವಾಗಿ ಕೊಡುತ್ತಿದ್ದರೂ ಅವರ ಸಂಸ್ಥೆಗಳ ವಿರುದ್ಧ ತನಿಖೆ ನಡೆಸುತ್ತಿಲ್ಲ. ಬಾಬರಿ ಮಸೀದಿ ಧ್ವಂಸಗೊಳಿಸಿರುವುದು ಅಪರಾಧ. ಆ ಘಟನಾವಳಿಯನ್ನು ಲೆಫ್ಟಿನೆಂಟ್ ಗವರ್ನರ್ ಕಿರಣ್ ಬೇಡಿ ಹಾಗೂ ಸಚಿವರ ಎದುರಲ್ಲೇ ಪ್ಲೇ ಮಾಡಲಾಗುತ್ತಿದೆ. ಅಂಥವರ ವಿರುದ್ಧ ಏಕೆ ಎಫ್.ಐ.ಆರ್ ದಾಖಲಿಸುತ್ತಿಲ್ಲ?ಬಿಜೆಪಿ ಸರ್ಕಾರ ಆಳುವ ವರ್ಗಕ್ಕೆ ಒಂದು ನೀತಿ, ಪ್ರಶ್ನಿಸುವ ವರ್ಗಕ್ಕೆ ಇನ್ನೊಂದು ನೀತಿಯನ್ನು ಅನುಸರಿಸುತ್ತಿದೆ’ ಎಂದು ದೂರಿದರು.