ಕಾನೂನಿಗಿಂತ ಯಾರೂ ದೊಡ್ಡವರಿಲ್ಲ. ಕೋರ್ಟ್ ತೀರ್ಪಿನಂತೆ ನಡೆದುಕೊಳ್ಳುತ್ತೇನೆ ಎಂದು ಈಚೆಗೆ ಬೆಂಗಳೂರಿನಲ್ಲಿ ಹೇಳಿಕೆ ನೀಡಿದ್ದಾರೆ. ಅದರೆ, ಅರ್ಜಿದಾರರಾಗಿ ಯಾವ ಕೋರ್ಟ್ ನಲ್ಲೂ ಪ್ರಕರಣ ದಾಖಲಿಸಿಲ್ಲ. ಟ್ರಸ್ಟಿನ ಆಡಳಿತ ತಾವೇ ನಡೆಸುತ್ತಿರುವುದಾಗಿ ಹೇಳಿಕೊಳ್ಳುತ್ತಿದ್ದಾರೆ. ಟ್ರಸ್ಟ್ ಅವರದ್ದೇ ಎಂಬುದಕ್ಕೆ ದಾಖಲೆ ಇಲ್ಲ. ಅವರೇ ಅಧ್ಯಕ್ಷರೆಂದು ಕೋರ್ಟ್ ಆದೇಶ ನೀಡಿದ್ದರೆ ಬಹಿರಂಗಪಡಿಸಲಿ ಎಂದು ಸವಾಲು ಹಾಕಿದರು.