<p><strong>ತುಮಕೂರು:</strong>ಡಾ.ಶಿವಕುಮಾರ ಸ್ವಾಮೀಜಿ ಅವರ ಆರೋಗ್ಯ ಮತ್ತಷ್ಟು ಸುಧಾರಣೆಗೆ ಚೆನ್ನೈನ ಡಾ. ರೇಲಾ ಇಂಟರ್ ನ್ಯಾಷನಲ್ ಮಲ್ಟಿಸ್ಪೆಷಾಲಿಟಿ ಹಾಸ್ಪಿಟಲ್ಗೆಕರೆದುಕೊಂಡು ಹೋಗಲಾಗುವುದು.ಮಠದಿಂದ ಬೆಳಿಗ್ಗೆ 10.30ಕ್ಕೆಸ್ವಾಮೀಜಿ ಹೊರಟಿದ್ದು, ಬೆಂಗಳೂರಿನ ಎಚ್ಎಎಲ್ವಿಮಾನ ನಿಲ್ದಾಣದಿಂದ<strong>ಐ ಕ್ಯಾಟ್ ಏರ್ ಅಂಬುಲೆನ್ಸ್</strong>ನಲ್ಲಿ ಮಧ್ಯಾಹ್ನ 12.30ಕ್ಕೆ ತೆರಳಲಿದ್ದಾರೆ.</p>.<p>ಸ್ವಾಮೀಜಿ ಅವರೊಂದಿಗೆ ಸಿದ್ಧಗಂಗಾ ಆಸ್ಪತ್ರೆಯ ಡಾ. ಪರಮೇಶ್, ಸ್ವಾಮೀಜಿ ಆರೈಕೆದಾರ ಮಲ್ಲಾರಾಧ್ಯ ಅವರು ಏರ್ ಅಂಬುಲೆನ್ಸ್ನಲ್ಲಿ ತೆರಳಲಿದ್ದಾರೆ.</p>.<p><strong>ತುರ್ತು ಪರಿಸ್ಥಿತಿಯಲ್ಲಿ ರೋಗಿಗಳನ್ನು ಶಿಪ್ಟ್ ಮಾಡಿದ ಅನುಭವ ಇದೆ: ಶಾಲಿನಿ ನಾಲ್ವಾಡ್</strong></p>.<p><strong>ವಿ</strong>ದೇಶದಲ್ಲಿ ತರಬೇತಿ ಪಡೆದು ಬೆಂಗಳೂರಿನಲ್ಲಿ ಐ ಕ್ಯಾಟ್ ಏರ್ ಅಂಬುಲೆನ್ಸ್ ಆರಂಭಿಸಿದ್ದೇವೆ. ತುರ್ತು ಪರಿಸ್ಥಿತಿಯಲ್ಲಿ ರೋಗಿಗಳನ್ನು ಸುರಕ್ಷಿತವಾಗಿ ಸಾಗಿಸಿದ ಅನುಭವ ಇದೆ ಎಂದು ಐ ಕ್ಯಾಟ್ ಏರ್ ಅಂಬುಲೆನ್ಸ್ ಮುಖ್ಯಸ್ಥೆ ಶಾಲಿನಿ ನಾಲ್ವಾಡ್ ಮಾಧ್ಯಮದವರಿಗೆ ತಿಳಿಸಿದರು.</p>.<p>ಐಸಿಯುನ ಎಲ್ಲ ವ್ಯವಸ್ಥೆ ಏರ್ ಅಂಬುಲೆನ್ಸ್ನಲ್ಲಿ ಇದೆ. ಇಬ್ಬರು ವೈದ್ಯರು ಒಬ್ಬ ಸಹಾಯಕರು ಅಂಬುಲೆನ್ಸ್ನಲ್ಲಿ ಇರಲಿದ್ದಾರೆ ಎಂದರು.</p>.<p>ಸ್ವಾಮೀಜಿ ಅವರನ್ನು ಮಠದಿಂದ ಆಸ್ಪತ್ರೆಯ ಬೆಡ್ವರೆಗೂ ಕರೆದುಕೊಂಡು ಹೋಗುವ ಜವಾಬ್ದಾರಿ ನಮ್ಮದು ಎಂದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ತುಮಕೂರು:</strong>ಡಾ.ಶಿವಕುಮಾರ ಸ್ವಾಮೀಜಿ ಅವರ ಆರೋಗ್ಯ ಮತ್ತಷ್ಟು ಸುಧಾರಣೆಗೆ ಚೆನ್ನೈನ ಡಾ. ರೇಲಾ ಇಂಟರ್ ನ್ಯಾಷನಲ್ ಮಲ್ಟಿಸ್ಪೆಷಾಲಿಟಿ ಹಾಸ್ಪಿಟಲ್ಗೆಕರೆದುಕೊಂಡು ಹೋಗಲಾಗುವುದು.ಮಠದಿಂದ ಬೆಳಿಗ್ಗೆ 10.30ಕ್ಕೆಸ್ವಾಮೀಜಿ ಹೊರಟಿದ್ದು, ಬೆಂಗಳೂರಿನ ಎಚ್ಎಎಲ್ವಿಮಾನ ನಿಲ್ದಾಣದಿಂದ<strong>ಐ ಕ್ಯಾಟ್ ಏರ್ ಅಂಬುಲೆನ್ಸ್</strong>ನಲ್ಲಿ ಮಧ್ಯಾಹ್ನ 12.30ಕ್ಕೆ ತೆರಳಲಿದ್ದಾರೆ.</p>.<p>ಸ್ವಾಮೀಜಿ ಅವರೊಂದಿಗೆ ಸಿದ್ಧಗಂಗಾ ಆಸ್ಪತ್ರೆಯ ಡಾ. ಪರಮೇಶ್, ಸ್ವಾಮೀಜಿ ಆರೈಕೆದಾರ ಮಲ್ಲಾರಾಧ್ಯ ಅವರು ಏರ್ ಅಂಬುಲೆನ್ಸ್ನಲ್ಲಿ ತೆರಳಲಿದ್ದಾರೆ.</p>.<p><strong>ತುರ್ತು ಪರಿಸ್ಥಿತಿಯಲ್ಲಿ ರೋಗಿಗಳನ್ನು ಶಿಪ್ಟ್ ಮಾಡಿದ ಅನುಭವ ಇದೆ: ಶಾಲಿನಿ ನಾಲ್ವಾಡ್</strong></p>.<p><strong>ವಿ</strong>ದೇಶದಲ್ಲಿ ತರಬೇತಿ ಪಡೆದು ಬೆಂಗಳೂರಿನಲ್ಲಿ ಐ ಕ್ಯಾಟ್ ಏರ್ ಅಂಬುಲೆನ್ಸ್ ಆರಂಭಿಸಿದ್ದೇವೆ. ತುರ್ತು ಪರಿಸ್ಥಿತಿಯಲ್ಲಿ ರೋಗಿಗಳನ್ನು ಸುರಕ್ಷಿತವಾಗಿ ಸಾಗಿಸಿದ ಅನುಭವ ಇದೆ ಎಂದು ಐ ಕ್ಯಾಟ್ ಏರ್ ಅಂಬುಲೆನ್ಸ್ ಮುಖ್ಯಸ್ಥೆ ಶಾಲಿನಿ ನಾಲ್ವಾಡ್ ಮಾಧ್ಯಮದವರಿಗೆ ತಿಳಿಸಿದರು.</p>.<p>ಐಸಿಯುನ ಎಲ್ಲ ವ್ಯವಸ್ಥೆ ಏರ್ ಅಂಬುಲೆನ್ಸ್ನಲ್ಲಿ ಇದೆ. ಇಬ್ಬರು ವೈದ್ಯರು ಒಬ್ಬ ಸಹಾಯಕರು ಅಂಬುಲೆನ್ಸ್ನಲ್ಲಿ ಇರಲಿದ್ದಾರೆ ಎಂದರು.</p>.<p>ಸ್ವಾಮೀಜಿ ಅವರನ್ನು ಮಠದಿಂದ ಆಸ್ಪತ್ರೆಯ ಬೆಡ್ವರೆಗೂ ಕರೆದುಕೊಂಡು ಹೋಗುವ ಜವಾಬ್ದಾರಿ ನಮ್ಮದು ಎಂದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>