ಬೆಂಗಳೂರು: ಸಭೆಗೆ ಹೋಗ್ತೀನಿ: ಸೌಮ್ಯಾರೆಡ್ಡಿ ‘ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಗೆ ಹಾಜರಾಗುತ್ತೇನೆ. ರಾಜೀನಾಮೆ ಕುರಿತು ಯಾವುದೇ ತೀರ್ಮಾನ ತೆಗೆದುಕೊಂಡಿಲ್ಲ’ ಎಂದು ಶಾಸಕಿ ಸೌಮ್ಯಾರೆಡ್ಡಿ ಹೇಳಿದರು.
ನಗರದಲ್ಲಿ ಮಂಗಳವಾರ ಮಾಧ್ಯಮ ಪ್ರತಿನಿಧಿಗಳಿಗೆ ಪ್ರತಿಕ್ರಿಯಿಸಿದಶಾಸಕಿ ಸೌಮ್ಯರೆಡ್ಡಿ, ತಂದೆ ರಾಮಲಿಂಗಾರೆಡ್ಡಿ ಕೈಗೊಳ್ಳುವ ನಿರ್ಧಾರ ಕ್ಕೆ ಬದ್ಧ ಎಂದರು.
ನನ್ನ ತಂದೆ ರಾಮಲಿಂಗಾರೆಡ್ಡಿಪಕ್ಷಕ್ಕಾಗಿ ದುಡಿದಿದ್ದಾರೆ. ಅವರನ್ನು ಕಡೆಗಣಿಸಿರುವುದು ಸರಿಯಲ್ಲ. ನಾನು ಸಿಎಲ್ಪಿಸಭೆಗೆ ಹೋಗುತ್ತೇನೆ. ನಂತರ ಮುಂದಿನ ತೀರ್ಮಾನ ಮಾಡುತ್ತೇನೆ.